24ನೇ ವಾರ್ಡಿನಲ್ಲಿ ಪಾಲಿಕೆಯಿಂದ ಸಿಸಿ ರಸ್ತೆ ಕಾಮಗಾರಿಗೆ ಪೂಜೆ

ದಾವಣಗೆರೆ, ಜ.4- ನಗರ ಪಾಲಿಕೆ ವ್ಯಾಪ್ತಿಯ 24ನೇ ವಾರ್ಡಿನ 4ನೇ ಮೇನ್, 8 ನೇ ಕ್ರಾಸ್‌ನಲ್ಲಿ ಪಾಲಿಕೆ ವತಿಯಿಂದ ಹೊಸ ಸಿ.ಸಿ‌ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಮಾಜಿ‌ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಪಾಲಿಕೆ ಸ್ಥಾಯಿ ಸಮಿತಿ‌ ಅಧ್ಯಕ್ಷರೂ ಆದ ವಾರ್ಡಿನ ಪಾಲಿಕೆ ಸದಸ್ಯ ಕೆ.ಪ್ರಸನ್ನ ಕುಮಾರ್ ಹಾಗೂ ಎಸ್.ಟಿ.ವೀರೇಶ್, ಗೌರಮ್ಮ ಗಿರೀಶ್, ನರೇಂದ್ರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮಾಜಿ ಮಹಾಪೌರರಾದ ಶ್ರೀಮತಿ ಸುಧಾ ಜಯರುದ್ರೇಶ್, ವಾರ್ಡಿನ ಮುಖಂಡರಾದ ಜಯರುದ್ರೇಶ್, ಡಾ.ಅಶ್ವಿನ್, ಡಾ. ಹೆಚ್.ಎನ್.ಮಲ್ಲಿಕಾರ್ಜುನ್‌, ಡಾ. ವಿ.ಎಸ್.ನಾಗಪ್ರಕಾಶ್, ಪದ್ಮನಾಭ್ ಶೆಟ್ರು, ಶೇಖರ್ ಉಪ್ಪಿನ್, ಕಿರಣ್ ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಯುವ ಮುಖಂಡರಾದ ಕಿಶೋರ್, ಕಿರಣ್‌, ವಿವೇಕ್, ಅನಿಲ್‌, ಮಹಿಳಾ ಮುಖಂಡರಾದ ಉಶಾ‌ ಪದ್ಮನಾಭ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!