ಶ್ರೀ ಶಿವಕುಮಾರ ಸ್ವಾಮೀಜಿ ಉದ್ಯಾನವನ ಅಭಿವೃದ್ಧಿಗೆ ಸಂಸದರಿಗೆ ಮನವಿ

ದಾವಣಗೆರೆ, ಮಾ.11 – ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ನ ರೈಲ್ವೇ ಟ್ರ್ಯಾಕ್ ಪಕ್ಕದ ಶ್ರೀ ಶಿವಕುಮಾರ ಸ್ವಾಮೀಜಿ ಉದ್ಯಾನವನವನ್ನು ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಿಕೊಡಬೇಕೆಂದು ಲೋಕಸಭಾ ಸದಸ್ಯ  ಜಿ.ಎಂ. ಸಿದ್ದೇಶ್ವರ ಅವರಿಗೆ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂಬಂಧ ತತ್‌ಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳ ದಲ್ಲೇ ಉಪಸ್ಥಿತರಿದ್ದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ  ಅವರಿಗೆ ಸಂಸದರು ನಿರ್ದೇಶಿಸಿದರು. ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಉಪಸ್ಥಿತರಿದ್ದರು.

ನಾಗರಿಕ ಹಿತಕ್ಷಣಾ ಸಮಿತಿಯ ಗೌರವ ಅಧ್ಯಕ್ಷರೂ ಆದ ಜಿಲ್ಲಾ ಗಾಣಿಗ ಸಮಾಜದ ಮುಖಂಡ ಕೆ.ಎಸ್. ಮಲ್ಲೇಶಪ್ಪ, ಉಪಾಧ್ಯಕ್ಷರೂ, ವಕೀಲರೂ ಆದ ಶ್ರೀಮತಿ ವಸುಂದರಾ, ಸಮಾಜ ಸೇವಕರಾದ ಕೆ.ಎಂ. ವೀರಯ್ಯ ಸ್ವಾಮಿ,  ಸ್ನೇಹ ಜೀವಿ ಸೇವಾ ಟ್ರಸ್ಟ್‍ನ ಶ್ರೀಧರ್ ಘೋರ್ಪಡೆ, ದೇವ ನಗರಿ ಸೇವಾ ಟ್ರಸ್ಟ್‍ ಕಾರ್ಯದರ್ಶಿ ಇ.ಎಂ. ಬಾಬು, ವಿರೂಪಾಕ್ಷಣ್ಣ, ರಾಕೇಶ್ ಹಾಗೂ ಇತರರು ಇದ್ದರು.

error: Content is protected !!