ಬಿಜೆಪಿ ಗೆಲುವು: ಜಿಲ್ಲೆಯಲ್ಲಿ ವಿಜಯೋತ್ಸವ

ನಾಲ್ಕು ರಾಜ್ಯಗಳಲ್ಲಿ ಪಕ್ಷ ಗೆದ್ದ ಹಿನ್ನೆಲೆಯಲ್ಲಿ ದಾವಣಗೆರೆ ಜಯದೇವ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು

ದಾವಣಗೆರೆ, ಮಾ.10- ಐದು ರಾಜ್ಯಗಳಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ವತಿಯಿಂದ ಗುರುವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್.ಎಂ ವೀರೇಶ್ ಹನಗವಾಡಿ ಮಾತನಾಡಿ, ನರೇಂದ್ರ ಮೋದಿಯವರ ಅಭಿವೃದ್ಧಿಯೋಜನೆ, ಕೋರೋನ ಸಂಕಷ್ಟದ ಸಮಯದಲ್ಲಿ ನಿರ್ವಹಣೆ, ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಜನರು ಬಿಜೆಪಿಗೆ ಮತ ನೀಡಿದ್ದಾರೆ. ಬಿಜೆಪಿಯ ಜಯಭೇರಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ವಿಧಾನ ಪರಿಷತ್ ಮಾಜಿ ಸಚೇತಕ  ಡಾ. ಎ. ಹೆಚ್ ಶಿವಯೋಗಿಸ್ವಾಮಿ, ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್, ಹಾವೇರಿ ಪ್ರಭಾರಿ ಎಲ್.ಎನ್ ಕಲ್ಲೇಶ್,  ಜಿಲ್ಲಾ ಉಪಾಧ್ಯಕ್ಷ ಮಂಜನಾಯ್ಕ್, ನಿಕಟ ಪೂರ್ವ ಅಧ್ಯಕ್ಷ ಯಶವಂತ್ ರಾವ್ ಜಾಧವ್, ಪಾಲಿಕೆ ಉಪ ಮೇಯರ್ ಗಾಯಿತ್ರಿಬಾಯಿ,  ಪಾಲಿಕೆ ಸದಸ್ಯರುಗಳಾದ  ಎಲ್. ಡಿ. ಗೋಣಪ್ಪ, ಕೆ.ಎಂ.ವೀರೇಶ್, ಎಸ್. ಟಿ. ವೀರೇಶ್,  ಸೋಗಿ ಶಾಂತಕುಮಾರ್,  ಶಿವಪ್ರಕಾಶ್,  ನರೇಂದ್ರಕುಮಾರ್, ಯೋಗೀಶ್, ಜಿಲ್ಲಾ ಖಜಾಂಚಿ ಬಾತಿ ವೀರೇಶ್, ಜಿಲ್ಲಾ ವಕ್ತಾರ ಶಿವಶಂಕರ್ ಜಿಲ್ಲಾ ಮಾಧ್ಯಮ ಸಂಚಾಲಕ ವಿಶ್ವಾಸ್ ಹೆಚ್.ಪಿ.,  ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಕೊಟ್ರೇಶ್ ಗೌಡ, ರಾಜ್ಯ ಗೋ ರಕ್ಷಕ ಸಂಚಾಲಕ ಬಿ.ಟಿ ಸಿದ್ದಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಂಡಲ ಅಧ್ಯಕ್ಷರುಗಳಾದ ಸಂಗನಗೌಡ್ರು, ದೇವೇಂದ್ರಪ್ಪ ಶ್ಯಾಗಲೆ, ಹನುಮಂತಪ್ಪ, ಬಸವರಾಜಯ್ಯ,  ರಾಜು ಶಾಮನೂರು, ರಾಜೇಶ್,  ಮಹೇಂದ್ರ ಹೆಬ್ಬಾಳ್, ಓಂಕಾರಪ್ಪ,  ರವಿನಾಯ್ಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ಮಹೇಶ್, ಪ್ರಧಾನ ಕಾರ್ಯದರ್ಶಿ ಪುಷ್ಪವಾಲಿ, ಭಾಗ್ಯ ಪಿಸಾಳೆ,  ಜ್ಯೋತಿ,  ಶಾಂತದೋರೆ,  ಶಾರದ ರಾಯ್ಕರ್, ಶ್ರೀನಿವಾಸ್ ಇತರರು  ಉಪಸ್ಥಿತಿತರಿದ್ದರು.

error: Content is protected !!