ಮುರುಘಾಮಠದ ಆಡಳಿತಾಧಿಕಾರಿಯಾಗಿ ಎಸ್.ಕೆ. ಬಸವರಾಜನ್ ಅಧಿಕಾರ ಸ್ವೀಕಾರ

ಚಿತ್ರದುರ್ಗ, ಮಾ.7- ಐತಿಹಾಸಿಕ ಶ್ರೀ ಮುರುಘರಾಜೇಂದ್ರ ಮಠದ ಆಡಳಿತಾಧಿಕಾರಿಗಳು ಹಾಗು ಎಸ್. ಜೆ. ಎಂ. ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾಗಿ ಎಸ್. ಕೆ. ಬಸವರಾಜನ್ ಸೋಮವಾರ ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾಪೀಠದ ನಿರ್ದೇಶಕರಾದ ಸೊಂಡೆಕೊಳ ಶ್ರೀನಿವಾಸ್, ಜಿಲ್ಲಾಪಂಚಾಯತ್ ಮಾಜಿ ಸದಸ್ಯರಾದ ಬಿ.ಟಿ ಶಾಂತಣ್ಣ ಪರಮಶಿವಯ್ಯ ಉಪಸ್ಥಿತರಿದ್ದರು.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಎಸ್.ಕೆ. ಬಸವರಾಜನ್, ಸ್ವಾಮೀಜಿಯವರು ನಮಗೆ ಕಾರ್ಯನಿರ್ವಹಿಸಿಕೊಂಡು ಹೋಗಲು ಅವಕಾಶ ನೀಡಿದ್ದಾರೆ ಎಂದರು.

error: Content is protected !!