ಹರಿಹರದಲ್ಲಿ ಮೆಡಿಕಲ್ ಕಾಲೇಜಿಗೆ ಆಗ್ರಹ

ಹರಿಹರ, ಫೆ.23-  ಹರಿಹರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡು ವಂತೆ ಆಗ್ರಹಿಸಿ ನಗರದ ಸರ್ಕಾರಿ ಮೆಡಿಕಲ್ ಕಾಲೇಜು ನಾಗರಿಕ ಹೋರಾಟ ಸಮಿತಿ ವತಿಯಿಂದ  ಜಿಲ್ಲಾಧಿಕಾರಿ ಗಳಿಗೆ ಕಳೆದ ಸೋಮವಾರ ಮತ್ತೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ, ಹರಿಹರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕು ಎಂದು  ಈ ಹಿಂದೆ ಮನವಿ ಸಲ್ಲಿಸಿದ್ದೆವು. ಈ ಉದ್ದೇಶದಿಂದ ಸಹಿ ಸಂಗ್ರಹ ಚಳವಳಿ ಕೂಡಾ ಹಮ್ಮಿಕೊಂಡಿದ್ದೆವು. 

ಈ ಹಿನ್ನೆಲೆಯಲ್ಲಿ   ಕಳೆದ ವರ್ಷ ಜುಲೈ 13 ರಂದು ಕನಕ ಗುರುಪೀಠದ ಶಾಖಾಮಠ (ಬೆಳ್ಳೂಡಿ) ಸಭಾಂಗಣದಲ್ಲಿ ಹರಿಹರದ ಸುತ್ತಮುತ್ತಲಿನ ವಿವಿಧ ಮಠಗಳ ಪೀಠಾಧಿಪತಿಗಳ ಸಾನ್ನಿಧ್ಯದಲ್ಲಿ ಹಾಗೂ ಜಿಲ್ಲಾ   ಉಸ್ತುವಾರಿ ಸಚಿವರ ಮತ್ತು ಸಂಸದರ ಸಮ್ಮುಖದಲ್ಲಿ ಹರಿಹರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವಂತೆ ಒತ್ತಾಯಿಸಲಾಗಿತ್ತು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಹರಿಹರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕಷ್ಟದ ವಿಷಯ ಆದರೂ ನಿಮ್ಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಗೌರಾವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ, ಅಧ್ಯಕ್ಷ ಹೆಚ್.ನಿಜಗುಣ, ಪ್ರಧಾನ ಕಾರ್ಯದರ್ಶಿ ಎನ್.ಹೆಚ್.ಶ್ರೀನಿವಾಸ್ ನಂದಿಗಾವಿ, ಸಂಚಾಲಕರಾದ ಪ್ರವೀಣ್ ಕುಮಾರ್, ಎಕ್ಕೆಗೊಂದಿ ಹೆಚ್.ಬಿ.ರುದ್ರಗೌಡ, ಜಿ.ಮುನೇಂದ್ರ, ಶಿವಕುಮಾರ್, ಸುಬ್ರಹ್ಮಣ್ಯ ನಾಡಿಗೇರ್ ಉಪಸ್ಥಿತರಿದ್ದರು.

error: Content is protected !!