ತರಳಬಾಳು ಸಮುದಾಯ ಭವನಕ್ಕೆ ದೇಣಿಗೆ

ಮಲೇಬೆನ್ನೂರು, ಫೆ. 15- ಗೊಲ್ಲರಹಳ್ಳಿಯಲ್ಲಿ ನಿರ್ಮಾಣಗೊಂಡು ಮುಕ್ತಾಯ ಹಂತದಲ್ಲಿರುವ ಶ್ರೀ ತರಳಬಾಳು ಸಮುದಾಯ ಭವನಕ್ಕೆ ಮಲೇಬೆನ್ನೂರಿನ ಶಿವ ವಿವಿಧೋದ್ಧೇಶ ಸಹಕಾರ ಸಂಘದಿಂದ ಮಂಗಳವಾರ 50 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರು.

ಶಿವ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್ ಅವರು ಹೊನ್ನಾಳಿ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಕರೇಗೌಡಪ್ಪ ಅವರಿಗೆ ದೇಣಿಗೆಯ ಚೆಕ್ ನೀಡಿದರು.

ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಹುಣಸಘಟ್ಟದ ಗದಿಗೇಶ್ ಅವರು, ನಮ್ಮ ಮನವಿ ಮೇರೆಗೆ ಮಲೇಬೆನ್ನೂರಿನ ಶಿವ ಸಹಕಾರ ಸಂಘದಿಂದ 50 ಸಾವಿರ ರೂ. ದೇಣಿಗೆ ನೀಡಿ ನೆರವಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಹರಿಹರ ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಹೊನ್ನಾಳಿ ತಾಲ್ಲೂಕು ಸಾಧು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಬೆನಕಪ್ಪ ಗೌಡ್ರು, ಕಾರ್ಯದರ್ಶಿ ಸಣ್ಣಬಸಪ್ಪ, ಮುಖಂಡರಾದ ಯಕ್ಕನಹಳ್ಳಿ ಬಸವರಾಜಪ್ಪ, ಅರಕೆರೆ ಹನುಮಂತಪ್ಪ, ಬೆನಕನಹಳ್ಳಿ ರುದ್ರೇಶ್, ಅರಬಗಟ್ಟಿ ರಮೇಶ್, ಶಿವ ವಿವಿಧೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷ ಯಲವಟ್ಟಿ ಆಂಜನೇಯ, ನಿರ್ದೇಶಕರಾದ ಹೆಚ್.ಜಿ. ಚಂದ್ರಶೇಖರ್, ಕೆ.ಜಿ. ರಂಗನಾಥ್, ಕುಂಬಳೂರಿನ ಹುಲ್ಲುಮನಿ ಷಣ್ಮುಖಪ್ಪ, ಜಿಗಳಿ ಪ್ರಕಾಶ್, ಪಾನಿಪೂರಿ ಸಿದ್ದೇಶ್, ಮಲೇಬೆನ್ನೂರಿನ ಕೆ.ಜಿ. ವೀರನಗೌಡ, ಯಲವಟ್ಟಿ ಯೋಮಕೇಶ್ವರಪ್ಪ, ನಿಟ್ಟೂರು ಧನಂಜಯ ಇದ್ದರು.

error: Content is protected !!