ಗಾಂಧಿನಗರ ದುಗ್ಗಮ್ಮ ದೇವಸ್ಥಾನದ ಹಂದರ ಕಂಬ ಪೂಜೆ

ದಾವಣಗೆರೆ, ಜ.8- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗಾಂಧಿನಗರದ ಶ್ರೀ ಹೊರಟ್ಟಿ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಇಂದು ಹಂದರ ಕಂಬದ ಪೂಜಾ ಕಾರ್ಯಕ್ರಮವನ್ನು ಪುರೋಹಿತ ದಾನಯ್ಯ ಶಾಸ್ತ್ರಿ ನಡೆಸಿಕೊಟ್ಟರು. ದೇವಸ್ಥಾನ ಟ್ರಸ್ಟ್‌ನ ಗೌರವ ಅಧ್ಯಕ್ಷ ಎನ್‌.ನೀಲಗಿರಿಯಪ್ಪ, ಅಧ್ಯಕ್ಷ ಎಲ್‌.ಎಂ.ಹನುಮಂತಪ್ಪ, ಕಾರ್ಯಾಧ್ಯಕ್ಷ ಬಿ.ಹೆಚ್‌.ವೀರಭದ್ರಪ್ಪ, ಖಜಾಂಚಿ ಬಿ.ಎಂ.ರಾಮಸ್ವಾಮಿ, ಬಿ.ಎಂ.ಈಶ್ವರ ಮತ್ತು  ಪೂಜಾರಿ ಹನುಮಂತಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!