ಗ್ರಾಪಂನಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಒತ್ತಾಯ

ಗ್ರಾಪಂನಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಒತ್ತಾಯ - Janathavaniರಾಣೇಬೆನ್ನೂರು, ಫೆ. 8- ಅರೆಮಲ್ಲಾಪುರ ಗ್ರಾಪಂ ಕಾರ್ಯಾಲಯದ ಸಭಾಭವನದಲ್ಲಿ ಸಿಸಿ ಕ್ಯಾಮರಾ ಹಾಗೂ ಧ್ವನಿಮುದ್ರಣ ಯಂತ್ರ ಅಳವಡಿಸುವಂತೆ ಗ್ರಾ.ಪಂ. ಸದಸ್ಯ ಶ್ರೀ ಪ್ರಣವಾನಂದರಾಮ  ಸ್ವಾಮಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ.

ಗ್ರಾಪಂ ಸಭೆಯಲ್ಲಿಯೇ ಓರ್ವ ಸದಸ್ಯ ತಮಗೆ ಜೀವ ಬೆದರಿಕೆ ಹಾಕಿದ್ದರಿಂದ, ಅದನ್ನು ಉಲ್ಲೇಖಿಸಿ  ಇಓ ಗೆ ಪತ್ರ ಬರೆದು ಶೀಘ್ರದಲ್ಲಿಯೇ ಈ ಕಾರ್ಯವನ್ನು ಮಾಡುವಂತೆ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಗ್ರಾಮದ ಸಂತೆ ಕಟ್ಟೆ, ಅದರ ಬಳಿ ಇರುವ ಎಪಿಎಂಸಿ ಕಟ್ಟಡವನ್ನು ಬಹಿರಂಗ ಹರಾಜು ಮಾಡಿ ಪಂಚಾಯ್ತಿಗೆ ಉತ್ಪನ್ನ ಬರುವಂತೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿರುವ ಪಂಚಾಯ್ತಿ ಆಸ್ತಿಯನ್ನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸುವಂತೆ ಸ್ವಾಮೀಜಿ ಒತ್ತಾಯಿಸಿದ ಪತ್ರವನ್ನು ಪತ್ರಿಕೆಗಳಿಗೆ ಕಳಿಸಿದ್ದಾರೆ.

error: Content is protected !!