ಮಂಜಿನಲ್ಲಿ ಮುಳುಗಿದ ನಗರ

ದಾವಣಗೆರೆ : ನಗರದಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಗಾಢ ಮಂಜು ಆವರಿಸಿತು. 8 ಗಂಟೆಯಾದರೂ ಮಂಜು ಕರಗಲಿಲ್ಲ. ವಾಹನ ಸವಾರರು ಹೆಡ್‌ಲೈಟ್‌ ಹಾಕಿಕೊಂಡರೂ ರಸ್ತೆ ನೋಡಲು ಕಸರತ್ತು ಮಾಡಬೇಕಾಯಿತು. ಕಳೆದ ನವೆಂಬರ್‌ನಲ್ಲಿ ಅಕಾಲಿಕ ಮಳೆ ಸುರಿದ ರೀತಿಯಲ್ಲೇ ಫೆಬ್ರವರಿಯಲ್ಲಿ ಅಕಾಲಿಕ ಮಂಜು ಸುರಿಯಿತೇ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬಂದವು.

error: Content is protected !!