ಅಂಬೇಡ್ಕರ್‌ಗೆ ಅಗೌರವ : ಪ್ರತಿಭಟನೆ

ನ್ಯಾ. ಮಲ್ಲಿಕಾರ್ಜುನ ಗೌಡ ವಿರುದ್ಧ ರಾಷ್ಟ್ರದ್ರೋಹ ಪ್ರಕರಣಕ್ಕೆ ಆಗ್ರಹ

ದಾವಣಗೆರೆ, ಜ.31- ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿ, ಬಾಬಾ ಸಾಹೇಬರಿಗೆ ಅವಮಾನಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಮೇಲೆ ರಾಷ್ಟ್ರದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಜಿಲ್ಲಾ ಎಸ್ಸಿ, ಎಸ್ಟಿ ಹಕ್ಕುಗಳ ಹೋರಾಟ ಸಮಿತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಉಪ ವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ  ಪ್ರತಿಭಟನಾಕಾರರು, ಉಪವಿಭಾ ಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಯಚೂರು ನ್ಯಾಯಾಲಯದಲ್ಲಿ ಗಣ ರಾಜ್ಯೋತ್ಸವ ಸಮಾರಂಭದ ವೇಳೆ ಅಲ್ಲಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಸಂವಿ ಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರ ತೆಗೆಸುವ ಮೂಲಕ ಬಾಬಾ ಸಾಹೇಬರಿಗೆ ಅವಮಾನಿಸಿದ್ದು ಅಕ್ಷಮ್ಯ. ದೇಶದ ಕಾನೂನು, ನ್ಯಾಯಾಂಗ ವ್ಯವಸ್ಥೆಯ ಜವಾಬ್ಧಾರಿಯುತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಗೌಡ ಅವರು ಎಸಗಿದ ಕೃತ್ಯ ಕ್ಷಮೆಗೆ ಅರ್ಹವಾದುದಲ್ಲ ಎಂದು ಸಮಿತಿ ಜಿಲ್ಲಾಧ್ಯಕ್ಷ ಆವರಗೆರೆ ವಾಸು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಡಿ.ಮಂಜುನಾಥ ಹಳೆ ಚಿಕ್ಕನಹಳ್ಳಿ, ಉಪಾಧ್ಯಕ್ಷ ರಾಜು ಕೆರನಹಳ್ಳಿ, ಉಪಾಧ್ಯಕ್ಷರಾದ ನಿಟುವಳ್ಳಿ ಜೀವನ್, ಸಿ.ಗುರುಮೂರ್ತಿ, ಕರ್ಣ ಮಳಲ್ಕೆರೆ, ರುದ್ರೇಶ ಮಳಲ್ಕೆರೆ, ಮಂಜುನಾಥ ಮೂರ್ತಿ, ಎಚ್.ಕೆ.ಹನುಮಂತಪ್ಪ ನಿಟುವಳ್ಳಿ, ಸ್ವಾಮಿ, ಪರಶುರಾಮ ಗುದ್ದಾಳ್, ಆಟೋ ಪರಶುರಾಮ, ಮಂಜುನಾಥ, ಟಿ.ಪರಶುರಾಮ, ಅರುಣ, ಎಸ್. ಪರಶುರಾಮ  ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!