ಹೊನ್ನಾಳಿ : ತುಂತುರು ನೀರಾವರಿ ಘಟಕ ವಿತರಣೆ

ಹೊನ್ನಾಳಿ, ಜ.31- ಕೃಷಿ ಇಲಾಖೆಯಿಂದ ಕೃಷಿ ತುಂತುರು ನೀರಾವರಿ ಘಟಕದ ಅನುದಾನ ಲಭ್ಯವಿದ್ದು, ರೈತರು ಅರ್ಜಿ ಸಲ್ಲಿಸಬಹುದು. 

75 ಘಟಕದ ಒಟ್ಟು ವೆಚ್ಚ 20702 ರೂ. ಗಳಿದ್ದು, ಸರ್ಕಾರದ ಸಹಾಯಧನ 18632, ರೈತರ ವಂತಿಕೆ 1932 ರೂ. ಆಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ತಿಳಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ನಗರದ ತುಮ್‌ಕೋಸ್ ಆವರಣದಲ್ಲಿ 30 ರೈತ ಫಲಾನುಭವಿಗಳಿಗೆ ಸಾಂಕೇತಿಕ ವಾಗಿ ತುಂತುರು ನೀರಾವರಿ ಘಟಕವನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಶೇ. 90 ರ ರಿಯಾಯತಿ ದರದಲ್ಲಿ ಸೌಲಭ್ಯ ನೀಡುತ್ತಿದ್ದು, ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಶಕ್ತವಾಗಿದೆ ಎಂದರು.  ತಾಲ್ಲೂಕು ಮುಖಂಡರಾದ ಅರಕೆರೆ ನಾಗರಾಜ್, ಶಿವು ಹುಡೇದ, ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅತೀಕ್ ಉಲ್ಲಾ, ರೈತ ಮುಖಂಡರು ಉಪಸ್ಥಿತರಿದ್ದರು.

error: Content is protected !!