ದಾವಣಗೆರೆ, ಜ.26 – ಹಳೇಬಾತಿಯ ಗುಡ್ಡದ ಕ್ಯಾಂಪಿನಲ್ಲಿರುವ ದರ್ಗಾದ ಬಳಿಯ ವೃತ್ತಕ್ಕೆ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಅಪ್ಪು ಸರ್ಕಲ್ ಎಂದು ನಾಮಕರಣ ಮಾಡಲಾಯಿತು. ಹಳೇಬಾತಿಯ ಅಪ್ಪು ಅಭಿಮಾನಿಗಳ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಸ್ಥಳಿಯ ಗ್ರಾ.ಪಂ. ಅಧ್ಯಕ್ಷ ಎಸ್.ಆರ್.ಸಿದ್ದೇಶ್, ಸದಸ್ಯರಾದ ಪ್ರಭು, ಕೆಂಚಪ್ಪ, ಸ್ಟೆಲ್ಲಾ ಕುಮಾರಿ, ಪರಸಪ್ಪ ಮತ್ತು ಕರ್ನಾಟಕ ಯುವಶಕ್ತಿ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಎಚ್.ರವಿಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಯುವಕರಿಂದ ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
July 23, 2024