ಸಿದ್ದರಾಮೇಶ್ವರರ ಜಯಂತಿಗೆ ಅಧಿಕಾರಿಗಳು ಗೈರು; ಶಾಸಕ ರಾಮಪ್ಪ ಆಕ್ಷೇಪ

ಸಿದ್ದರಾಮೇಶ್ವರರ ಜಯಂತಿಗೆ ಅಧಿಕಾರಿಗಳು ಗೈರು; ಶಾಸಕ ರಾಮಪ್ಪ ಆಕ್ಷೇಪ

ಹರಿಹರ, ಜ. 15 – ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳ ಜಯಂತಿ ಆಚರಣೆಯಲ್ಲಿ ತಾಲ್ಲೂಕು ಆಡಳಿತದ ಅಧಿಕಾರಿಗಳು ಭಾಗವಹಿಸದ ಕಾರಣ ಶಾಸಕ ಎಸ್. ರಾಮಪ್ಪ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ತಾಲ್ಲೂಕು ಆಡಳಿತ ಸಿದ್ದರಾಮೇಶ್ವರರ ಜಯಂತಿ ಆಚರಿಸಲು ಸರ್ಕಾರ ಸೂಚನೆ ನೀಡಿದೆ. ಆದರೆ ಅವರು ಹಿಂದುಳಿದ ವರ್ಗದವರು ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ರಾಮಪ್ಪ ಆಕ್ಷೇಪಿಸಿದರು.

ಈ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ತಾಲ್ಲೂಕು ಆಡಳಿತದ ಅಧಿಕಾರಿಗಳು ಮುಂದೆ ಯಾವುದೇ ದಾರ್ಶನಿಕರ ಜಯಂತಿ ನಿರ್ಲಕ್ಷಿಸಿದರೆ ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ತಾಲ್ಲೂಕು ಭೋವಿ ಜನಾಂಗದ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ಮಲೆಬೆನ್ನೂರು ಪುರಸಭೆ ಮಾಜಿ ಅಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಯುವರಾಜ್ ಹೆಚ್.ಡಿ. ಎಂ.ಕೆ. ಸ್ವಾಮಿ, ಬ್ಯಾಂಕ್ ರಾಮಣ್ಣ, ದಿನೇಶ್, ಮಂಜಪ್ಪ ಎಸ್.ಹೆಚ್. ರಾಜೇಶ್ ವಿಜಯಕುಮಾರ್ ಮಲೇಬೆನ್ನೂರು ಹೆಚ್.ಬಿ. ರುದ್ರೇಗೌಡ ಮತ್ತಿತರರು ಹಾಜರಿದ್ದರು. 

error: Content is protected !!