ದಾವಣಗೆರೆ, ಜ. 14 – ನವದೆಹಲಿಯಲ್ಲಿ ಇದೇ ದಿನಾಂಕ 26 ರಂದು ನಡೆಯಲಿರುವ 75ನೇ ಗಣರಾಜ್ಯೋತ್ಸವಕ್ಕೆ ಶಿವಮೊಗ್ಗ ಆಯುಷ್ ಇಲಾಖೆಯ ಯೋಗ ಶಿಕ್ಷಕ ಮಹೇಂದ್ರ ಬಿ.ಆರ್ ರಾಜ್ಯದಿಂದ ನಾಮ ನಿರ್ದೇಶನಗೊಂಡಿದ್ದಾರೆ. ಅಂದು ನಡೆಯುವ ಕಾರ್ಯಕ್ರಮ ದಲ್ಲಿ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಿಂದ ಒಟ್ಟು 18 ಜನ ಯೋಗ ತರಬೇತುದಾರರನ್ನು ರಾಜ್ಯ ಆಯುಷ್ ಇಲಾಖೆಯ ಆಯುಕ್ತರು ನಾಮ ನಿರ್ದೇಶನ ಮಾಡಿ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಮಹೇಂದ್ರ ಅವರು ಕಳೆದ 3 ವರ್ಷಗಳಿಂದ ಆಯುಷ್ ಇಲಾಖೆಯಲ್ಲಿ ಹಾಗು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹೇಂದ್ರ ಅವರಿಗೆ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರು ಏಷ್ಯನ್ ಯೋಗಾಸನ ಆಚಾರ್ಯ ಡಾ. ಎಂ. ನಿರಂಜನಮೂರ್ತಿ, ಮರ್ಮ ಯೋಗ ಗುರುಗಳಾದ ಟಿ. ಪ್ರದೀಪ್ ಅರಸ್ ಅಭಿನಂದನೆ ಸಲ್ಲಿಸಿದ್ದಾರೆ.
July 24, 2024