ನ್ಯಾಮತಿ, ಜ.14- ಗ್ಯಾಸ್ಟ್ರಿಕ್ ಹೊಟ್ಟೆ ನೋವಿನಿಂದಾಗಿ ಬಳಲುತ್ತಿದ್ದ ಯುವಕನೊಬ್ಬ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನ್ಯಾಮತಿ ತಾಲ್ಲೂಕಿನ ಮಲ್ಲಿಗೇನಹಳ್ಳಿಯಲ್ಲಿ ಇಂದು ನಡೆದಿದೆ.
ರಾಮಪ್ಪನವರ ಸುಪುತ್ರ ಐಟಿಐ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಮನೋಜ್ (21) ಹೊಲ ಮನೆ ಕೆಲಸ ಮಾಡಿಕೊಂಡಿದ್ದ. ಮೊನ್ನೆ ವಿಷ ಸೇವಿಸಿದ್ದು, ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.