ಬೈಕ್ ಸ್ಕಿಡ್‌ನಿಂದ ಬಿದ್ದು ನರಳಾಡುತ್ತಿದ್ದ ತಂದೆ – ಮಗುವನ್ನು ರಕ್ಷಿಸಿದ ಡಾ. ರವಿ

ಬೈಕ್ ಸ್ಕಿಡ್‌ನಿಂದ ಬಿದ್ದು ನರಳಾಡುತ್ತಿದ್ದ ತಂದೆ – ಮಗುವನ್ನು ರಕ್ಷಿಸಿದ ಡಾ. ರವಿ

ದಾವಣಗೆರೆ, ಡಿ. 26- ಸಮೀಪದ ಆನಗೋಡು- ಅಣಜಿ ಮಾರ್ಗವಾಗಿ ಜಗಳೂರಿಗೆ ಹೊರಟಿದ್ದ ಆರೈಕೆ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಟಿ.ಜಿ. ರವಿಕುಮಾರ್ ಅವರು ಪವಾಡ ರಂಗವ್ವನಹಳ್ಳಿಯ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ನರಳಾಡುತ್ತಿದ್ದ ತಂದೆ, ಮಗುವನ್ನು ರಕ್ಷಿಸಿದರು.

ಕ್ರಿಸ್ ಮಸ್ ಕಾರಣ ಆನಗೋಡು ಪಿಹೆಚ್‌ಸಿ  ರಜೆ ಇದ್ದಿದ್ದರಿಂದ ಸಮೀಪದ ಖಾಸಗಿ ಕ್ಲಿನಿಕ್ ಗೆ ಕರೆದೊಯ್ದು, ತಾವೇ  ಖುದ್ದಾಗಿ ಗಾಯಾಳುವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಪ್ರಥಮ ಚಿಕಿತ್ಸೆ ನೀಡಿದ ನಂತರ  ಗಾಯಾಳುವನ್ನು     ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು  ಡಾ. ರವಿಕುಮಾರ್ ತಿಳಿಸಿದ್ದಾರೆ.

error: Content is protected !!