ಬಿಜೆಪಿ ಕಾರ್ಯಕರ್ತರಿಂದ ವಾಜಪೇಯಿ ಜನ್ಮ ದಿನಾಚರಣೆ

ಬಿಜೆಪಿ ಕಾರ್ಯಕರ್ತರಿಂದ ವಾಜಪೇಯಿ ಜನ್ಮ ದಿನಾಚರಣೆ

ಜಗಳೂರು, ಡಿ. 26- ಇಲ್ಲಿನ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಿಂದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು. 

ಜಿಲ್ಲಾ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರ ಅಧ್ಯಕ್ಷ ಕೃಷ್ಣಮೂರ್ತಿ ಪವಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಲಿಂಗರಾಜು, ಹಾಲೇಕಲ್ ಚಂದ್ರಾ ನಾಯ್ಕ್, ಬೆಣ್ಣೆದೋಸೆ ರವಿಶಂಕರ್, ಆರ್. ಪ್ರತಾಪ್, ಶ್ರೀಮತಿ ಸರೋಜಮ್ಮ ದೀಕ್ಷಿತ್, ಅಂತೋಣಿ, ರಾಮಚಂದ್ರ ವಾಡೋನಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಾ. ಅರುಣ್ ಕುಮಾರ್, ಶಿವಕುಮಾರಸ್ವಾಮಿ,  ಎನ್.ಎಸ್. ರಾಜು ಮತ್ತು ಇತರರು ಮಾತನಾಡಿದರು. ತಾಲ್ಲೂಕು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರ ಅಧ್ಯಕ್ಷ ಬಾಬುರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಟಿ. ಕಲ್ಲೇಶ್ ಕಾರ್ಯಕ್ರಮ ನಿರೂಪಿಸಿದರು. 

error: Content is protected !!