ರಾಣೇಬೆನ್ನೂರು ನಗರಸಭೆ ಉಪಚುನಾವಣೆ; ಬಿಜೆಪಿ ಗೆಲುವು ಖಚಿತ

ರಾಣೇಬೆನ್ನೂರು ನಗರಸಭೆ ಉಪಚುನಾವಣೆ; ಬಿಜೆಪಿ ಗೆಲುವು ಖಚಿತ - Janathavaniರಾಣೇಬೆನ್ನೂರು, ಡಿ.21- ನಗರಸಭೆ 22ನೇ ವಿಭಾಗದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ತ್ರಿವೇಣಿ ಪವಾರ್‌ ಗೆಲ್ಲುವದರೊಂದಿಗೆ ನಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಮಾಜಿ ಶಾಸಕ ಅರುಣಕುಮಾರ್‌ ಪೂಜಾರ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಅಧಿಕಾರದ ಅವಧಿಯಲ್ಲಿ ನನ್ನ ಅನುದಾನದಿಂದ ಆ ವಿಭಾಗದಲ್ಲಿ ಸುಮಾರು ಎರಡೂವರೆ ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಜೊತೆಗೆ ಆ ವಿಭಾಗ  ಬಿಜೆಪಿಯ  ತವರುಮನೆ ಇದ್ದಂತೆ, ಅಲ್ಲಿ ನಮ್ಮ ಪಕ್ಷದವರೇ ಸದಸ್ಯರಾಗಿದ್ದರು. 

ನಾವು ಅಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ಅಲ್ಲಿನ ಮತದಾರರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದು ತ್ರಿವೇಣಿ ಅವರ ಜಯ ಖಚಿತವೆಂದು ಅರುಣಕುಮಾರ್‌ ಹೇಳಿದರು.

ಅಭ್ಯರ್ಥಿ ತ್ರಿವೇಣಿ ಮಾತನಾಡಿದರು. ಭಾರತಿ ಜಂಬಗಿ, ಡಾ.ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ, ಎ.ಬಿ. ಪಾಟೀಲ, ಪ್ರಕಾಶ ಪೂಜಾರ್‌,  ನಾರಾಯಣ ಪವಾರ್‌ ಮತ್ತಿತರರಿದ್ದರು.

error: Content is protected !!