ನಗರದಲ್ಲಿ ಇಂದು ಶಾಲಾ-ಕಾಲೇಜು ಅಂಗಳದಲ್ಲಿ ಕಸಾಪ ಉಪನ್ಯಾಸ

ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಮಾಜಿ ಪುರಸಭಾ ಪ.ಪೂ. ಕಾಲೇಜು ಆವರಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಸುರೇಶ್‌ ಆರ್‌. ಅಧ್ಯಕ್ಷತೆ ವಹಿಸುವರು. `ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಚಿಂತನೆಗಳು’ ವಿಷಯ ಕುರಿತು ಡಾ. ಜೆ.ಬಿ. ರಾಜ್‌ ಉಪನ್ಯಾಸ ನೀಡುವರು.  ಶ್ರೀಮತಿ ಸೌಭಾಗ್ಯ ಹೆಚ್‌.ಎಂ., ದಾಗಿನಕಟ್ಟೆ ಪರಮೇ ಶ್ವರಪ್ಪ, ನವೀನ್‌ಕುಮಾರ್‌    ಉಪಸ್ಥಿತರಿ ರುವರು. ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು. ಶ್ರೀಮತಿ ಸಿದ್ದಮ್ಮ ಬಿಸನಹಳ್ಳಿ ಪರ್ವತಪ್ಪ ದತ್ತಿ ದಾನಿಗಳಾದ ಶ್ರೀಮತಿ ಚೆಲುವಾಂಬ ಮತ್ತು ಪ್ರೊ. ಬಿ. ಸದಾಶಿವಪ್ಪ,  ಸಂತೆಬೆನ್ನೂರು ಶ್ರೀಮತಿ ಲಕ್ಷ್ಮಮ್ಮ ಹಾಲಪ್ಪ ದತ್ತಿ ದಾನಿಗಳಾದ ಬಿ.ಹೆಚ್. ಸಿದ್ದಪ್ಪ, ತರಳಬಾಳು ಬಡಾವಣೆ ಹಾಗೂ   ಕತ್ತಲಗೆರೆ ಶ್ರೀಮತಿ ಮಲ್ಲಮ್ಮ ಗೌಡರ ಜಯದೇವಪ್ಪ ದತ್ತಿ ದಾನಿಗಳಾದ ಶ್ರೀಮತಿ ಆರ್. ಸುಧಾ ಮತ್ತು ಡಾ. ಜೆ.ಬಿ. ರಾಜ್‌  ಇವರುಗಳಿಂದ ನಡೆಯುವುದು.ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರುಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

error: Content is protected !!