ನ್ಯಾಯಾಂಗ ಇಲಾಖೆ ಭೂಲಕ್ಷ್ಮಿ ಗೆ ಸನ್ಮಾನ

ನ್ಯಾಯಾಂಗ ಇಲಾಖೆ ಭೂಲಕ್ಷ್ಮಿ ಗೆ ಸನ್ಮಾನ

ದಾವಣಗೆರೆ, ಡಿ.20- ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಳೆದ ವಾರ  ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ,  ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎಂ. ಹೆಗಡೆ ಅವರು, ರಾಜ್ಯ  ಸರ್ಕಾರಿ ನೌಕರರ  ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ನ್ಯಾಯಾಂಗ ಇಲಾಖೆಯಲ್ಲಿ ಆದೇಶ ಜಾರಿಕಾರರಾದ ಶ್ರೀಮತಿ ಭೂಲಕ್ಷ್ಮಿ ಅವರನ್ನು ಸನ್ಮಾನಿಸಿ, ಗೌರವಿಸಿದರು. 

error: Content is protected !!