ದಾವಣಗೆರೆ, ಡಿ.17- ಇತ್ತೀಚಿನ ದಿನಗಳಲ್ಲಿ ಕೆಲವು ಶಾಲೆಯ ಪ್ರಾಧ್ಯಾಪಕ ರುಗಳು ಮಕ್ಕಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ ಮೊಬೈಲ್ ಉಪಯೋಗಿಸು ತ್ತಿದ್ದು, ಇದರಿಂದ ಮಕ್ಕಳ ಏಕಾಗ್ರತೆ ಹಾಗೂ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಡಿಡಿಪಿಐಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸುಧೀಂದ್ರ ಕುಮಾರ್, ಶ್ರೀಧರ್ ಟಿ, ಪೋತುಲ ಶ್ರೀನಿವಾಸ್, ಆಶಾ, ವಿನುತ ಮತ್ತಿತರರು ಹಾಜರಿದ್ದರು.
ಶಾಲೆಯಲ್ಲಿ ಶಿಕ್ಷಕರಿಂದ ಮೊಬೈಲ್ ಬಳಕೆ ಡಿಡಿಪಿಐಗೆ ಹಕ್ಕುಗಳ ಸಮಿತಿ ದೂರು
![shaleyalli shikhsaka ಶಾಲೆಯಲ್ಲಿ ಶಿಕ್ಷಕರಿಂದ ಮೊಬೈಲ್ ಬಳಕೆ ಡಿಡಿಪಿಐಗೆ ಹಕ್ಕುಗಳ ಸಮಿತಿ ದೂರು](https://janathavani.com/wp-content/uploads/2023/12/shaleyalli-shikhsaka-860x376.jpg)