ಮಳಲಹಳ್ಳಿಯಲ್ಲಿ ಆರೋಗ್ಯ ಅರಿವು

ಮಳಲಹಳ್ಳಿಯಲ್ಲಿ ಆರೋಗ್ಯ ಅರಿವು

ಮಲೇಬೆನ್ನೂರು, ಡಿ.17- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಉಕ್ಕಡಗಾತ್ರಿ, ನಂದಿಗುಡಿ, ಮಳಲಹಳ್ಳಿ, ಹೊಸಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ರಂಗಶ್ರೀ ಕಲಾ ತಂಡದಿಂದ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬೀದಿನಾಟಕ ಪ್ರದರ್ಶನ ನಡೆಸಲಾಯಿತು.

ಕ್ಷಯ, ಕುಷ್ಠ ರೋಗ, ತಾಯಿ ಮತ್ತು ಮಗುವಿನ ಆರೋಗ್ಯ, ಹೆಚ್ಐವಿ, ಮತ್ತು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ, ರೋಗಗಳ ಬಗ್ಗೆ ಬೀದಿ ನಾಟಕ ಮೂಲಕ ಅರಿವು ಮೂಡಿಸಲಾಯಿತು.

ರಂಗಶ್ರೀ ಕಲಾ ತಂಡದ ನಾಯಕ ಜಿಗಳಿ ರಂಗನಾಥ್, ಕಲಾವಿದರಾದ ಕೆ.ಲಿಂಗರಾಜು, ಯೋಗೀಶ್, ನಾಗರತ್ನ, ಸುಲೋಚನಾ, ಕಮಲಮ್ಮ, ರತ್ನಮ್ಮ, ಮನು ಭಾಗವಹಿಸಿದ್ದರು.

error: Content is protected !!