ಅಧಿವಕ್ತ ಪರಿಷತ್‌ನಿಂದ ಸಂವಿಧಾನ, ವಕೀಲರ ದಿನಾಚರಣೆ

ಅಧಿವಕ್ತ ಪರಿಷತ್‌ನಿಂದ ಸಂವಿಧಾನ, ವಕೀಲರ ದಿನಾಚರಣೆ

ದಾವಣಗೆರೆ ಡಿ. 17 – ನಗರದ ಕೆ.ಬಿ. ಬಡಾವಣೆಯಲ್ಲಿ ಅಧಿವಕ್ತ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತ ದಾವಣಗೆರೆ ಘಟಕದಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯನ್ನು ನಿನ್ನೆ ಆಚರಿಸಲಾಯಿತು.

ವಕೀಲರು ಹಾಗೂ ನಿವೃತ್ತ ಸರ್ಕಾರಿ ಅಭಿಯೋಜಕ ಕೆ. ನಾಗರಾಜ ಆಚಾರ್‌, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಮಂಜುನಾಥ್‌ ಬಿ.  ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಅಧಿವಕ್ತಾ ಪರಿಷತ್‌ನ ಅಧ್ಯಕ್ಷರೂ ಆದ ಹಿರಿಯ ವಕೀಲ ಎಲ್‌. ದಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿದ್ದರು. 

ಆರ್‌. ಅ.ಪ.ಕ.ದ ಪ್ರಾಂತದ ರಾಜ್ಯ ಉಪಾಧ್ಯಕ್ಷ ಯೋಗೇಶ್ವರಪ್ಪ, ರಾಜ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌ ಎಂ.ಎಸ್‌. ಹಿರಿಯ ವಕೀಲರಾದ ಕವಿತಾ ಬಿ.   ಮತ್ತು ಇತರರು ಉಪಸ್ಥಿತರಿದ್ದರು. 

error: Content is protected !!