ಕಾಳಿಕಾಂಬ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ವಿಶೇಷ ಪೂಜೆ

ಕಾಳಿಕಾಂಬ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ವಿಶೇಷ ಪೂಜೆ

ದಾವಣಗೆರೆ, ಆ. 4 – ನಗರದ ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ದೇವಸ್ಥಾನದಲ್ಲಿ  ಅಧಿಕ ಶ್ರಾವಣ ಪುರುಷೋತ್ತಮ ಮಾಸದ ಪ್ರಯುಕ್ತ ದುರ್ಗಾ ದೀಪಾರಾಧನೆ, ದೇವಿಗೆ 33 ವಿಧದ ನೈವೇದ್ಯ, ಭಕ್ಷ್ಯ, ಫಲಪುಷ್ಪ, ಧನಧಾನ್ಯ, ಸಿಹಿಖಾದ್ಯ ಪದಾರ್ಥಗಳೊಂದಿಗೆ ಅಮ್ಮನವರಿಗೆ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು. 

ಇದೇ ಸಂದರ್ಭದಲ್ಲಿ ಶ್ರೀ ಕಾಳಿಕಾದೇವಿ ಭಜನಾ ಮಂಡಳಿಯವರಿಂದ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಾರಾಯಣ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಉಮಾ ನಾಗರಾಜ್‌, ಶ್ರೀಮತಿ ಶ್ರೀದೇವಿ ಅಮರಾ ವತಿ, ಶ್ರೀಮತಿ ಅಗಡಿ ಶಶಿಕಲಾ, ಶ್ರೀಮತಿ ಸರಸ್ವತಿ ವಸಂತಕುಮಾರ್‌ ಸೇರಿದಂತೆ ಭಜನಾ ಮಂಡಳಿಯ ಇತರೆ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇವಸ್ಥಾನದ ಅರ್ಚಕರಾದ ಬ್ರಹ್ಮಶ್ರೀ ಟೀಕಾಚಾರ್‌ ಅವರು ವಿಶೇಷ ಪೂಜೆ ಕಾರ್ಯಗಳನ್ನು ನೆರವೇರಿಸಿದರು. ದೇವಸ್ಥಾನ ಟ್ರಸ್ಟ್‌ ಕಮಿಟಿಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

error: Content is protected !!