ವಿಶ್ವ ಸ್ಕೌಟ್ ಜಾಂಬೂರಿಗೆ ಜಿಲ್ಲೆಯ ಇಬ್ಬರ ಆಯ್ಕೆ

ವಿಶ್ವ ಸ್ಕೌಟ್ ಜಾಂಬೂರಿಗೆ ಜಿಲ್ಲೆಯ ಇಬ್ಬರ ಆಯ್ಕೆ - Janathavaniದಾವಣಗೆರೆ, ಜು. 25- ದಕ್ಷಿಣ ಕೋರಿಯಾ ದೇಶದ ಗನ್‌ಸಾನ್‌ಸಿಯಲ್ಲಿ ಆಗಸ್ಟ್ 1 ರಿಂದ 12ರವರೆಗೆ ನಡೆಯಲಿ ರುವ  ವಿಶ್ವ ಸ್ಕೌಟ್ ಜಾಂಬೂರಿ ಯಲ್ಲಿ ಜಿಲ್ಲೆಯಿಂದ ತರಳಬಾಳು ಜಗದ್ಗುರು ಶಾಲೆಯ ಕು. ಎಸ್.ಕೆ. ಶ್ರೀರಕ್ಷಾ ಭಾಗವಹಿಸಲಿದ್ದಾರೆ.

ಇದೇ ಜಾಂಬೂರಿಯಲ್ಲಿ ಅಂತರರಾಷ್ಟ್ರೀಯ ಸೇವಾ ತಂಡದ ಸದಸ್ಯರಾಗಿ ಹರಿಹರದ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯ ಬಿ.ಪಿ. ವಿಜಯ ಕುಮಾರ್ ಭಾಗವಹಿಲಿ ದ್ದಾರೆ.

ವಿಶ್ವದಾದ್ಯಂತ 216 ದೇಶಗಳಿಂದ ಸ್ಕೌಟ್, ಗೈಡ್ ಮಕ್ಕಳು ವಿವಿಧ ಸಾಂಸ್ಕೃತಿಕ ಮತ್ತು ಕೌಶಲ್ಯಾಧಾರಿತ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದು, ದಾವಣಗೆರೆ ಸ್ಕೌಟ್, ಗೈಡ್ ಮತ್ತು ನಾಯಕರು ಈ ಹಿಂದೆ 1951 ರಿಂದ ವಿಶ್ವ ಜಾಂಬೂರಿ ಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಸ್ಕೌಟ್, ಗೈಡ್ ಮಕ್ಕಳಿಗೆ ಜಿಲ್ಲಾ ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಜೆ. ಚಿಗಟೇರಿ, ಸ್ಕೌಟ್ ಆಯುಕ್ತ ಎ.ಪಿ. ಷಡಾಕ್ಷ ರಪ್ಪ, ಶುಭ ಹಾರೈಸಿದ್ದಾರೆ.

error: Content is protected !!