ಹಳೇ ಮನೆಯ ತ್ಯಾಜ್ಯ ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಿ

ಹಳೇ ಮನೆಯ ತ್ಯಾಜ್ಯ ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಿ

ಜಗಳೂರು ಪ.ಪಂ.ಮುಖ್ಯಾಧಿಕಾರಿ ಸೂಚನೆ

ಜಗಳೂರು, ಜು.8- ಪಟ್ಟಣದಲ್ಲಿನ ಹಳೇ‌ ಕಟ್ಟಡದ ಘನತ್ಯಾಜ್ಯ ಮಣ್ಣನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರು ಕಟ್ಟಡ ಕಾರ್ಮಿಕ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗೃಹ ಕಟ್ಟಡ ಕಾಮಗಾರಿ ಗುತ್ತಿಗೆದಾರರಿಗೆ ಕರೆದಿದ್ದ ಸಭೆಯಲ್ಲಿ ಅವರು ಮಾತ ನಾಡಿದರು.

ಪಟ್ಟಣದ ವಿವಿಧೆಡೆ ಹಳೆ ಮನೆಗಳನ್ನು ನೆಲಸಮ ಮಾಡಿದ ವೇಳೆ ತ್ಯಾಜ್ಯ ಮಣ್ಣು ಹಾಗೂ ಇತರೆ ವಸ್ತುಗಳನ್ನು ಪಟ್ಟಣದ ಮರೇನಹಳ್ಳಿ ರಸ್ತೆ, ಕೊಟ್ಟೂರು ಮುಖ್ಯ ರಸ್ತೆಗಳಲ್ಲಿ ಹಾಕುವುದರಿಂದ ವಾಯು ವಿಹಾರಿಗಳಿಗೆ ಮತ್ತು ವಾಹನ ಸಂಚಾರಿಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಇದರಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆ ನಿರ್ಮಾಣದ ಗುತ್ತಿಗೆದಾರರು ಹಾಗೂ ಮಾಲೀಕರು, ಕಾರ್ಮಿಕ ಸಂಘಟನೆ ಮುಖಂಡರುಗಳು ಜಾಗೃತರಾಗಿ ಪಟ್ಟಣ ಪಂಚಾಯಿತಿ ನಿಗದಿಪಡಿಸಿದ ಸ್ಥಳದಲ್ಲಿ ಒಂದೆಡೆ ಸಂಗ್ರಹ ಮಾಡಬೇಕು ಎಂದು ತಿಳಿಸಿದರು.

ಮರೇನಹಳ್ಳಿ ರಸ್ತೆಯಲ್ಲಿ ಸರ್ವೆ ನಂಬರ್ 51ರಲ್ಲಿ ಸ್ಥಳ ಮೀಸಲು : ತಾತ್ಕಾಲಿಕವಾಗಿ ತಾಲ್ಲೂಕು ದಂಡಾಧಿಕಾರಿಗಳ ಆದೇಶದಂತೆ ಪಟ್ಟಣದ ಮರೇನಹಳ್ಳಿ ರಸ್ತೆಯ 51 ನೇ ಸರ್ವೆ ನಂಬರ್ ನ ಕಲ್ಲುಕ್ವಾರಿಯ ಖಾಲಿ ತಗ್ಗಾದ ಪ್ರದೇಶವನ್ನು ಗುರುತಿಸಿ ಮೀಸಲಿಡಲಾಗಿದೆ. ತ್ಯಾಜ್ಯ ಮಣ್ಣು ಇತರೆ ವಸ್ತುಗಳನ್ನು ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಪೌರಾಡಳಿತ ಇಲಾಖೆಯ ನಿಯಮಾವಳಿಯಂತೆ ಇಲಾಖೆಯ ಸೂಚನಾ ಪ್ರಕಟಣೆಗಳನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ರಸ್ತೆ ಬದಿ ತ್ಯಾಜ್ಯ ವಸ್ತುಗಳನ್ನು ಹಾಕಿದರೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ‌ಕೈಗೊಳ್ಳಲಾಗು ವುದು ಎಂದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಖಿಫಾಯತ್, ಗೃಹ ನಿರ್ಮಾಣ ಗುತ್ತಿಗೆದಾರರು, ಕಾರ್ಮಿಕ ಸಂಘಟನೆ ಮುಖಂಡರು ಇದ್ದರು‌.

error: Content is protected !!