ಹರಪನಹಳ್ಳಿ-ಅರಸೀಕೆರೆ-ದಾವಣಗೆರೆ ನೂತನ ಸಾರಿಗೆ ಬಸ್‍ಗೆ ಚಾಲನೆ

ಹರಪನಹಳ್ಳಿ-ಅರಸೀಕೆರೆ-ದಾವಣಗೆರೆ ನೂತನ ಸಾರಿಗೆ ಬಸ್‍ಗೆ ಚಾಲನೆ

ಹರಪನಹಳ್ಳಿ, ಜು.9- ಹರಪನಹಳ್ಳಿಯಿಂದ ಅರಸೀಕೆರೆ ಮಾರ್ಗವಾಗಿ ದಾವಣಗೆರೆಗೆ ಸಂಚರಿಸುವ ನೂತನ ಸಾರಿಗೆ ಬಸ್ಸನ್ನು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಹಿರೇಮೇಗಳಗೆರೆ ಗ್ರಾಮದಲ್ಲಿ ಚಾಲನೆ ನೀಡಿದರು.

ನೂತನ ಬಸ್‍ಗೆ ಚಾಲನೆ ನೀಡಿ ಮಾತನಾಡಿದ ಎಂ.ಪಿ.ಲತಾ ಮಲ್ಲಿಕಾರ್ಜುನ್, ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಶಾಲಾ- ಕಾಲೇಜ್ ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೂತನ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಇದು ನಿತ್ಯ ಹರಪನಹಳ್ಳಿಯಿಂದ ಅರಸೀಕೆರೆ ಮಾರ್ಗವಾಗಿ ಕಂಭತ್ತಹಳ್ಳಿ, ಪುಣಭಘಟ್ಟ, ಹಿರೇ ಮೇಗಳಗೆರೆ, ವಡ್ನಹಳ್ಳಿ, ಪುಟಗನಹಾಳ್‌, ಬೇತೂರು ಮೂಲಕ ದಾವಣಗೆರೆಗೆ ಸಂಚರಿಸಲಿದೆ. ಪುನಃ ದಾವಣಗೆರೆಯಿಂದ ಇದೇ ಮಾರ್ಗವಾಗಿ ಹರಪನಹಳ್ಳಿಗೆ ಬರಲಿದೆ ಇದರ ಉಪಯೋಗವನ್ನು ಜನರು ಪಡೆದುಕೊಳ್ಳಬೇಕೆಂದರು.

ಇದೇ ವೇಳೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಿರೇಮೇಗಳಗೆರೆ ಗ್ರಾಮದಲ್ಲಿ ನೂತನ ಗ್ರಂಥಾಲಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಹಿರೇಮೇಗಳಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕಳ್ಳಿ ಹನುಮಂತಪ್ಪ, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಲಾಟಿ ದಾದಾಪೀರ್, ಗೊಂಗಡಿ ನಾಗರಾಜ್, ಮುಖಂಡರಾದ ಮಹಾಭಲೇಶ್ವರಗೌಡ, ಗಂಗಪ್ಪ, ಎಚ್.ವಸಂತಪ್ಪ, ವೈ.ಕೆ.ಬಿ.ದುರುಗಪ್ಪ, ಎಲ್.ಮಂಜ್ಯಾನಾಯ್ಕ್, ಮತ್ತೂರು ಬಸವರಾಜ್, ಹರಿಯಮ್ಮನಹಳ್ಳಿ ಶಿವರಾಜ ಪ್ರಸಾದ್ ಸೇರಿದಂತೆ ಇತರರು ಇದ್ದರು.

error: Content is protected !!