ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಕಾರ್ಯಾಗಾರ

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಕಾರ್ಯಾಗಾರ

ದಾವಣಗೆರೆ, ಜು. 6- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ  ದಾವಣಗೆರೆ ಹಾಗೂ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ನಗರದ ಡಯಟ್‌ ನಲ್ಲಿ  ಚಿಂತನ- ಮಂಥನ ಸಭೆ ನಡೆಸಲಾಯಿತು. 

ಡಯಟ್ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ಎಸ್. ಗೀತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, 2023-24ನೇ  ಶೈಕ್ಷಣಿಕ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂಬ ಹೆಸರಿನಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದ್ದು, 2022-23ನೇ ಸಾಲಿನ ಫಲಿತಾಂಶದಲ್ಲಿ ಜಿಲ್ಲೆ 14ನೇ ಸ್ಥಾನ ಪಡೆದಿದ್ದು, ಈ ಬಾರಿ ಜಿಲ್ಲೆಯನ್ನು ಮೊದಲ 5 ಸ್ಥಾನದೊಳಗೆ ತರಲು ವಿಷನ್-5 ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಕಳೆದ ಸಾಲಿನಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು, ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಕ್ರಿಯಾ ಶೀಲರಾಗಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸುರೇಶ್ ಬಿ. ಇಟ್ನಾಳ್ ರವರು ಈ ಕುರಿತು ಸಭೆ ಮಾಡಿ, ಮಾರ್ಗದರ್ಶಿಸಿರುತ್ತಾರೆ. ಎಲ್ಲರೂ ಒಟ್ಟಾಗಿ ದಾವಣಗೆರೆ ಜಿಲ್ಲೆಯ ಫಲಿತಾಂಶದ ಪ್ರಗತಿ ಗಾಗಿ ಶ್ರಮಿಸೋಣ ಎಂದು ಗೀತಾ ತಿಳಿಸಿದರು.

ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಅಧಿಕಾರಿಗಳಿಗೆ ದತ್ತು ನೀಡಿರುವ ಬಗ್ಗೆ ಹಿರಿಯ ಉಪನ್ಯಾಸಕರಾದ ಶ್ರೀಮತಿ ಹೆಚ್.ಆರ್. ವಿಶಾಲಾಕ್ಷಿ ಅವರು ಮಾಹಿತಿ ಹಂಚಿಕೊಂಡರು. 

ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರಪ್ಪ ಇವರು ಶಾಲೆಗಳಲ್ಲಿ ಶಿಕ್ಷಕರು  ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತಾ, ಮುಖ್ಯ ಶಿಕ್ಷಕರು ಮತ್ತು ಶಾಲಾ ಭೇಟಿ ಮಾಡುವ ಅಧಿಕಾರಿಗಳು, ಶಿಕ್ಷಕರಿಗೆ ಮಾರ್ಗದರ್ಶನ ಮಾಡುವ ಬಗ್ಗೆ ತಿಳಿಸಿದರು. 

ಡಯಟ್‍ನ ಹಿರಿಯ ಉಪನ್ಯಾಸಕ ಎಂ.ಮಂಜುನಾಥ ಸ್ವಾಮಿ, ಎಂ.ಎ. ಸೊರಬ, ಡಿ.ವೈ.ಪಿ.ಸಿ. ಎಲ್. ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ ಮತ್ತು ವಿಷಯ ಪರಿವೀಕ್ಷಕ ರಾದ ಎಂ ಶಶಿಕಲಾ ಹಾಗೂ ಎಂ. ಸುರೇಶಪ್ಪ ಇವರುಗಳು ಮುಖ್ಯ ಶಿಕ್ಷಕರಿಗೆ ವಿವಿಧ ನಿದ ರ್ಶನಗಳನ್ನು ನೀಡುತ್ತಾ, ಫಲಿತಾಂಶ ವೃದ್ಧಿಗಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. 

error: Content is protected !!