ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ ಔಚಿತ್ಯಪೂರ್ಣ

ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ ಔಚಿತ್ಯಪೂರ್ಣ

ದೃಶ್ಯ ಕಲಾ ವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ಶಿಬಿರಕ್ಕೆ ಚಾಲನೆ ನೀಡಿದ ಡಾ. ಕೆ .ಶಿವಶಂಕರ್

ದಾವಣಗೆರೆ, ಜೂ.22-     ವಿದ್ಯಾರ್ಥಿ ಗಳಿಗೆ  ವ್ಯಕ್ತಿತ್ವ ರೂಪಿಸಿಕೊಳ್ಳಲು, ಸಹಬಾಳ್ವೆ, ಸಂಘಟನಾ ಚಾತುರ್ಯ  ಹೆಚ್ಚಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಸಹಕಾರಿ ಎಂದು ದಾವಿವಿ ಪರೀಕ್ಷಾಂಗ ಕುಲಸಚಿವ  ಡಾ.ಕೆ.ಶಿವಶಂಕರ್ ಅಭಿಪ್ರಾಯಿಸಿದರು.

ದಾವಿವಿಯ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಹಾಗೂ  ದೃಶ್ಯ ಕಲಾ ಮಹಾವಿದ್ಯಾಲಯ  ಇವುಗಳ ಸಹಯೋಗದಲ್ಲಿ ಇದೇ  ದಿನಾಂಕ 19 ರಿಂದ  26 ರವರೆಗೆ  `ಸ್ವಚ್ಛ ಭಾರತ ಆಂದೋಲನ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತ’ ಘೋಷಣೆಯೊಂದಿಗೆ   ಆರಂಭಗೊಂಡ   ಶಿಬಿರಕ್ಕೆ  ಅವರು ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಶಿಬಿರವು ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ ಹೊಂದಿರುವುದು ಬಹಳ ಔಚಿತ್ಯಪೂರ್ಣ. ಏಕೆಂದರೆ ಇಂದು ಪ್ಲಾಸ್ಟಿಕ್ ಬಳಕೆ ಮಿತಿ ಮೀರಿ ಪರಿಸರಕ್ಕೆ, ಜೀವ ಜಲದ ಉಳಿವಿಗೆ ಮಾರಕವಾಗಿದೆ. ಹಾಗಾಗಿ ಈ ಶಿಬಿರದ ಮೂಲಕ ನೀವು-ನಾವೆಲ್ಲರೂ ನಮ್ಮಗಳ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಮಟ್ಟಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ ಎಂದು ಸಂಕಲ್ಪಬದ್ಧರಾಗಿ ನಡೆಯೋಣ  ಎಂದು ಡಾ. ಕೆ .ಶಿವಶಂಕರ್  ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಾವಿವಿ  ಕಲಾ ನಿಕಾಯದ ಡೀನ್ ಡಾ.ವೆಂಕಟರಾವ್ ಪಲಾಟೆ ಮಾತನಾಡಿ, ರಾ.ಸೇ.ಯೋಜನೆ ಮುಖ್ಯ ಉದ್ದೇಶ ಭಾರತೀಯ ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ಸಹಬಾಳ್ವೆ, ಸೇವಾ ಮನೋಭಾವನೆಯಂತಹ ಉತ್ತಮ ಮೌಲ್ಯಗಳನ್ನು ಬಿತ್ತುವುದಾಗಿದೆ.   ವಿದ್ಯಾರ್ಥಿಗಳು  ಶಿಬಿರದ ಚಟುವಟಿಕೆಗಳಲ್ಲಿ ಪಾಲ್ಗೊಂಡು ತರಬೇತಿ ಪಡೆಯಬೇಕು, ಈ ಶಿಬಿರ  ಬೆಳಕಿನ ಕಿರಣ ಹೊಮ್ಮಿಸುವಂತಾಗಲಿ ಎಂದು ಆಶಿಸಿದರು. 

ಎನ್. ಎಸ್. ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಪರಶುರಾಮ ಖಟಾವಕರ್  ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.   ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ  ವಿ.ಪಾಳೇದ ರಾ.ಸೇ.ಯೋಜನೆ ಆರಂಭವಾದ ಹಿನ್ನೆಲೆ, ಉದ್ದೇಶ, ಔಚಿತ್ಯವನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿದರು.

ದೃಶ್ಯ ಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಸತೀಶ್ ಕುಮಾರ್ ಪಂಚಪ್ಪ ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು. ದೃಶ್ಯ ಕಲಾ ಮಹಾ ವಿದ್ಯಾಲಯದ ರಾ.ಸೇ.ಯೋ. ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಜೈರಾಜ್ ಚಿಕ್ಕ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೃಶ್ಯ ಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ  ಎನ್. ಭಟ್ಟ ವಂದಿಸಿದರು.

ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಕು.ಮುರಳಿ ಕೃಷ್ಣ ಆರಂಭದಲ್ಲಿ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿನಿ ಕು.ಕೀರ್ತನಾ ಅಲ್ಫೋನ್ಸಾ ಕಾರ್ಯಕ್ರಮ ನಿರೂಪಿಸಿದರು.  

ಶಿಬಿರದ ಪದಾಧಿಕಾರಿಗಳಾದ ಡಾ.ಎಂ.ಕೆ.ಗಿರೀಶ್ ಕುಮಾರ್, ಡಾ.ಸಂತೋಷ ಕುಮಾರ್ ಕುಲಕರ್ಣಿ,   ಪ್ರಮೋದ್ ಕೆ.ವಿ,   ಹರೀಶ್ ಎಸ್. ಎಚ್,   ಶಿವಶಂಕರ್ ಸುತಾರ್,   ಡಿ.ಎಚ್. ಸುರೇಶ್,  ರಂಗನಾಥ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!