ಉತ್ತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಉತ್ತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಗುಜರಾತಿನ ಮೊರ್ಬಿ ಕ್ಷೇತ್ರದ ಶಾಸಕ ಕಾಂತೇಶ್ ಭಾಗಿ

ದಾವಣಗೆರೆ, ಏ.19- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ  ನಾಗರಾಜ್ ಲೋಕಿಕೆರೆ ಅವರ ಚುನಾವಣಾ ಕಾರ್ಯಾಲಯವನ್ನು ನಗರದಲ್ಲಿ ಇಂದು ಉದ್ಘಾಟಿಸಲಾಯಿತು.

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಈ ಚುನಾವಣಾ ಕಾರ್ಯಾಲಯದ ಶುಭಾರಂಭಕ್ಕೆ ಗುಜರಾತಿನ ಮೊರ್ಬಿ ಕ್ಷೇತ್ರದ ಶಾಸಕರು ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಕಾಂತೇಶ್ ಅಮೃತೇಯ, ಶಾಸಕರಾದ ಎಸ್.ಎ. ರವೀಂದ್ರನಾಥ್, ಹಿರಿಯ ಮುಖಂಡರಾದ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮುಖಂಡರುಗಳಾದ ಡಿ.ಹೆಚ್. ಶಿವಶಂಕರ್, ಬಸವರಾಜ್ ಇನ್ನಿತರರು ಇದ್ದರು.

error: Content is protected !!