ಪತ್ರಿಕಾ ವಿತರಕರಿಂದ ಅಂಬೇಡ್ಕರ್ ಜಯಂತಿ
ನಗರದ ಪತ್ರಿಕಾ ವಿತರಕರು ಮತ್ತು ವಾಯು ವಿಹಾರ ಬಳಗದ ವತಿಯಿಂದ ಪಿ.ಬಿ. ರಸ್ತೆಯಲ್ಲಿರುವ ರಮೇಶ್ ಕಾಫಿ ಬಾರ್ ಹತ್ತಿರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಹುಟ್ಟುಹಬ್ಬ ಆಚರಿಸಿ ಸಿಹಿ ವಿತರಿಸಲಾಯಿತು.
ನಗರದ ಪತ್ರಿಕಾ ವಿತರಕರು ಮತ್ತು ವಾಯು ವಿಹಾರ ಬಳಗದ ವತಿಯಿಂದ ಪಿ.ಬಿ. ರಸ್ತೆಯಲ್ಲಿರುವ ರಮೇಶ್ ಕಾಫಿ ಬಾರ್ ಹತ್ತಿರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಹುಟ್ಟುಹಬ್ಬ ಆಚರಿಸಿ ಸಿಹಿ ವಿತರಿಸಲಾಯಿತು.
ಹರಿಹರ ವಿಧಾನಸಭಾ ಕ್ಷೇತ್ರದ ಮುಖಂಡರು, ಎಲ್ಲಾ ಘಟಕಗಳ ಪದಾಧಿಕಾರಿಗಳು, ಬೂತ್ ಮಟ್ಟದ ಅಧ್ಯಕ್ಷರುಗಳು, ನಗರಸಭಾ ಸದಸ್ಯರ ಪೂರ್ವಭಾವಿ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಎಚ್. ಕೆ. ವೀರಪ್ಪ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕರೆಯಲಾಗಿದೆ
ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಧಾರವಾಡ) ಸಂಸ್ಥೆಯಿಂದ ಪ.ಪಂಗಡದವರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ನಾಡಿದ್ದು ದಿನಾಂಕ 17 ರಿಂದ 26 ರವರೆಗೆ ನಗರದ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ನೀಡಲಾಗುತ್ತಿದೆ.
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಆರ್.ಜಿ.ಶ್ರೀನಿವಾಸ ಮೂರ್ತಿ, ಶ್ರೀಮತಿ ಹೇಮಾ ಶ್ರೀನಿವಾಸ್, ಆರ್.ಎಸ್.ಸಾಯಿ ರಿಶಾನ್, ಆರ್. ಎಸ್. ಸಾಯಿ ಹೃತ್ವಿಕ್ ಅವರು ಇಂದಿನ ದಾನಿಗಳಾಗಿದ್ದಾರೆ.
ದಾವಣಗೆರೆ ಕ್ರಿಕೆಟರ್ಸ್ ವತಿಯಿಂದ ಇಂದಿನಿಂದ ಇದೇ ದಿನಾಂಕ 30ರ ವರೆಗೆ ಹೈಸ್ಕೂಲ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ನಡೆಯಲಿದೆ.
ನ್ಯಾಮತಿ ತಾಲ್ಲೂಕಿನ ಚೀಲೂರು ಶ್ರೀ ವೀರಭದ್ರೇ ಶ್ವರ ಸ್ವಾಮಿ ರಥೋತ್ಸವ ನಾಳೆ ದಿನಾಂಕ 17 ರ ಬುಧವಾರ ಬೆಳಿಗ್ಗೆ ನಡೆಯಲಿದೆ. ಸಂಜೆ ಓಕುಳಿ ನಡೆಯಲಿವೆ.
ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ವಾಸಿ ತಿಮ್ಮಪ್ಳರ ದಿ. ಶ್ರೀೀಮತಿ ಗೌರಮ್ಮ ದಿ. ಕೆ.ಟಿ. ಸಿದ್ದಪ್ಪನವರ ಪುತ್ರ ಕೆ.ಟಿ. ನಾಗೇಂದ್ರಪ್ಪ (74) ಇವರು ದಿನಾಂಕ 15.04.2024ರ ಸೋಮವಾರ ಬೆಳಿಗಿನ ಜಾವ 6.40ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ರಾಂಪುರ ಗ್ರಾಮದ ವಾಸಿ ದಿ|| ಶ್ರೀಮತಿ ಮರಿಯಮ್ಮ ದಿ|| ದಾಸಪ್ಪ ಅವರ ಪುತ್ರ ಎ.ಕೆ. ರಾಜಪ್ಪ ಅವರು ದಿನಾಂಕ 15.4.2024ರ ಸೋಮವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.
ಹೊನ್ನಾಳಿ : ತಾಲ್ಲೂಕಿನ ಹಳೆದೇವರ ಹೊನ್ನಾಳಿ ಗ್ರಾಮ ದೇವರಾದ ಶ್ರೀ ಲಕ್ಷ್ಮೀಮಾಧವ ರಂಗನಾಥಸ್ವಾಮಿ ಮಹಾರಥೋತ್ಸವವು ಭಾನುವಾರ ಬೆಳಿಗಿನ ಜಾವ ಬೆಳಗ್ಗೆ 5.30 ರ ಬ್ರಾಹ್ಮೀ ಮುಹೂರ್ತದಲ್ಲಿ ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಇಂದು ನಡೆಯಲಿದೆ. ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರು ಹಾಗೂ ಕೆಪಿಸಿಸಿ ನಿಕಟಪೂರ್ವ ಮಾಜಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ 14ನೇ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು.
ಮೂಲಭೂತ ಸೌಲಭ್ಯಗಳ ಬೇಡಿಕೆಗೆ ಇದುವರೆಗೂ ಯಾವ ಪಕ್ಷದ ಜನಪ್ರತಿನಿಧಿಗಳು ಸ್ಪಂದಿಸದೇ ಇರುವ ಕಾರಣ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಗರದ ಕುಂದುವಾಡ ರಸ್ತೆಯ ಸಮೀಪದ ಮಹಾಲಕ್ಷ್ಮಿ ಬಡಾವಣೆ ನಾಗರಿಕರು ಎಚ್ಚರಿಸಿದ್ದಾರೆ.