ನಗರದಲ್ಲಿ ಇಂದು ಸಿದ್ದೇಶ್ವರರಿಂದ ಸಾರ್ವಜನಿಕರ ಭೇಟಿ
ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇಂದು ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.
ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇಂದು ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.
ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ನಗರದ ಚಾಣಕ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ತೃತೀಯ ಬಿ.ಎ ವಿದ್ಯಾರ್ಥಿ ಪಿ.ಎಚ್. ಪವನ್ ಅಂತರರಾಷ್ಟೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಖಿಲ ಕರ್ನಾಟಕ ಯುವರಾಜ್ಕಮಾರ್ ಅಭಿಮಾನಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 12 ರ ಶುಕ್ರವಾರ ಸಂಜೆ 6.30 ಕ್ಕೆ ನಿಟುವಳ್ಳಿ ಮಣಿಕಂಠ ವೃತ್ತದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಜನ್ಮ ದಿನ ಆಚರಿಸಲಾಗುವುದು
ಜನಸಂಖ್ಯಾ ಸ್ಫೋಟ ದೇಶದ ಬೆಳವಣಿಗೆಗೆ ಮಾರಕವಾಗಿದೆ. ಜನಸಂ ಖ್ಯಾ ಸ್ಫೋಟ ತಡೆಯಲು ಅಪಾರವಾಗಿ ಶ್ರಮಿಸಿದ ರಾಜ್ಯಗಳಿಗೆ ಪ್ರೋತ್ಸಾಹ ಸಿಗುವ ಬದಲು ಎರಡು ರೀತಿಯ ಹೊಡೆತಗಳು ಎದುರಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಷಾದಿಸಿದರು.
ಕೆಪಿಟಿಸಿಇಎಲ್ ಇಇ ಡಿ.ಎಚ್. ಉಮೇಶ್, ಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ದೂರುದಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಒಟ್ಟು ಎಂಟು ಕಡೆ ದಾವಣಗೆರೆ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ.
ನಗರದ ಮೋತಿ ವೀರಪ್ಪ ಕಾಲೇಜು ಹಿಂಭಾಗದ ಜೈನ್ ಲ್ಯಾಬ್ ಕೆಳಗಿರುವ ಡಾ. ಎನ್.ಹೆಚ್. ಕೃಷ್ಣ ಅವರ ಕ್ಲಿನಿಕ್ನಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ನಾಡಿದ್ದು ದಿನಾಂಕ 13ರ ಶನಿವಾರ ಉಚಿತ ಶ್ವಾಸಕೋಶ ತಪಾಸಣೆ (ಸ್ಪೈರೋಮೀಟರ್) ಹಾಗೂ ಉಚಿತ ವೈದ್ಯರ ಸಲಹೆ ನೀಡಲಾಗುವುದು.
ಚಂದ್ರದರ್ಶನದಿಂದ ಪ್ರಾರಂಭವಾಗಿರುವ ಮುಸ್ಲಿಂ ಬಾಂಧವರ ಹೊಸ ವರ್ಷದ ಸಂಕೇತವಾಗಿರುವ ಮೊಹರಂ ಹಬ್ಬದ `ಯಾದೇ ಹುಸೇನ್’ ಅಂಗವಾಗಿ ಕೆ.ಆರ್.ರಸ್ತೆಯಲ್ಲಿರುವ ನೂರಾನಿ ಆಟೋ ಚಾಲಕರ ಸಂಘದ ಆಶ್ರಯದಲ್ಲಿ 10 ದಿನಗಳವರೆಗೆ ಮೊಹರಂ ತಖರೀರ್ (ಉಪನ್ಯಾಸ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಹಂಗಮ ಯೋಗ ಸಂತ ಸಮಾಜದ ಸ್ಥಾಪನೆ. ಶತಾಬ್ದ ಸಮಾರೋಪ ಮಹೋತ್ಸವ 25,000 ಕುಂಡಗಳನ್ನು ಇರಿಸಿ ಸ್ವರ್ವೇದ ಜ್ಞಾನ ಮಹಾಯಜ್ಞ ನಿಮಿತ್ತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆಯೋಜಿಸಲಾ ಗಿರುವ ರಾಷ್ಟ್ರವ್ಯಾಪಿ ಸಂಕಲ್ಪ ಯಾತ್ರೆಯು ಅನೇಕ ರಾಜ್ಯಗಳಿಂದ ಪ್ರವಾಸಗೊಂಡು ಇಂದು ನಗರವನ್ನು ತಲುಪಲಿದೆ.
ತಾಲ್ಲೂಕಿನ ಬೆಳವನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಬಿ.ವೈ. ಮಹೇಂದ್ರ ನಾಥ್ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ರೋಟ ರಾಕ್ಟ್ ಕ್ಲಬ್ ಆರ್ಜಿಐಸಿಎಂ ಸಂಸ್ಥೆ ಅಧ್ಯಕ್ಷ ರಾಗಿ ಚನ್ನಗಿರಿ ಮನೆತನದ ಕು. ನೇಹಾ ಚನ್ನಗಿರಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ಭಾರತೀಯ ವೈದ್ಯ ಮಂಡಳಿ, ದಾವಣಗೆರೆ ಎಸ್ ಎಸ್ ಆಸ್ಪತ್ರೆ, ವರ್ತಕರ ಸಂಘ, ಎಪಿಎಂಸಿ, ಹಮಾಲರ ಸಂಘ ಒಟ್ಟಾಗಿ ಬ್ಯಾಂಕ್ ಹತ್ತಿರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ತಾಲ್ಲೂಕು ಅಧ್ಯಕ್ಷರಾಗಿ ಶಂಭು ಎಸ್. ಉರೇಕೊಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.