ಸುಗಮ ಸಂಚಾರಕ್ಕಾಗಿ, ಫುಟ್‌ಪಾತ್ ಒತ್ತುವರಿ ಸರಿಪಡಿಸಿ

ಸುಗಮ ಸಂಚಾರಕ್ಕಾಗಿ,  ಫುಟ್‌ಪಾತ್ ಒತ್ತುವರಿ ಸರಿಪಡಿಸಿ

ಮಾನ್ಯರೇ,

ದಾವಣಗೆರೆ ಚಾಮರಾಜ ಪೇಟೆ ಮುಖ್ಯ ರಸ್ತೆಯ ಪಾದಚಾರಿ ಮಾರ್ಗವನ್ನು ತರಕಾರಿ ವ್ಯಾಪಾರಸ್ಥರು ಆಕ್ರಮಿಸಿ ವ್ಯಾಪಾರ, ವಹಿವಾಟು ಮಾಡುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೀವ್ರ ಅಸ್ತವ್ಯಸ್ತವಾಗುತ್ತಿದೆ.

ಪಾದಚಾರಿ ರಸ್ತೆ ಒತ್ತುವರಿ ಮಾಡಿದ್ದರಿಂದ ಪೇಟೆಯಲ್ಲಿನ ಅಂಗಡಿಗಳ ಮುಂಭಾಗ ಸರಕು ತಲುಪಿಸುವ ವಾಹನಗಳು ನಿಂತಾಗ ಟ್ರಾಫಿಕ್‌ ಸಮಸ್ಯೆ, ಹಾರ್ನ್‌ ಶಬ್ದ ಮತ್ತು ನೂಕು ನುಗ್ಗಲು ಉಂಟಾಗುತ್ತಿದೆ.

ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು, ಪಾರ್ಕಿಂಗ್ ವ್ಯವಸ್ಥೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

– ಕೆ.ಆರ್. ಆದಿತ್ಯ

error: Content is protected !!