ದಾಳಿಕೋರ ಬೀದಿ ನಾಯಿಗಳಿಂದ ರಕ್ಷಿಸಿ

ದಾಳಿಕೋರ ಬೀದಿ ನಾಯಿಗಳಿಂದ ರಕ್ಷಿಸಿ

ಮಾನ್ಯರೇ,

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ ಹಾಗೂ ಶಂಕರ ವಿಹಾರ ಬಡಾವಣೆಯಲ್ಲಿ ದಾಳಿಕೋರ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದೆ. ಇಲ್ಲಿನ ಪ್ರತಿ ರಸ್ತೆಗಳಲ್ಲೂ 15ರಿಂದ 20 ಬೀದಿ ನಾಯಿಗಳು ಪ್ರತಿ ನಿತ್ಯ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಲೇ ಇದ್ದು, ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿವೆ.

ಅಂಗಡಿಯಿಂದ ದಾಸ್ತಾನು ಹಾಗೂ ಆಹಾರ ಪದಾರ್ಥವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಾಗ ಈ ನಾಯಿಗಳು ದಾಳಿ ನಡೆಸಿ ಚೀಲ ಕಿತ್ತುಕೊಂಡು ಹೋಗುತ್ತವೆ. 

ಶಾಲಾ ಮಕ್ಕಳು ಹಾಗೂ ವಯೋವೃದ್ಧರು ರಸ್ತೆಯಲ್ಲಿ ಏಕಾಂಗಿಯಾಗಿ ಸಂಚರಿಸದಂತೆ ಇಲ್ಲಿನ ಶ್ವಾನಗಳು ಭಯ ಸೃಷ್ಟಿಸಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳನ್ನು ಇಲ್ಲಿಂದ ಸ್ಥಳಾಂತರಿಸಿ ಸಮಸ್ಯೆ ಬಗೆಹರಿಸಿ.

– 15ನೇ ವಾರ್ಡಿನ ನೊಂದ ನಾಗರಿಕರು

error: Content is protected !!