ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ

ಹೊನ್ನಾಳಿ, ಜು.25- ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಸಿಡಿಪಿಒ ಮಹಾಂತೇಶ್ ಪೂಜಾರ್ ಅವರು ತಡೆದಿದ್ದು, ಪೋಷಕ ರಿಗೆ ತಿಳುವಳಿಕೆ ನೀಡಿದರು.

ಮಕ್ಕಳ ಸಹಾಯವಾಣಿಗೆ ಮಂಗಳವಾರ ಬಂದ ಕರೆಯ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಲ್ಯ ವಿವಾಹವನ್ನು ತಡೆದಿದ್ದು, ಇಂತಹ ಮದುವೆಗಳಿಗೆ ಯಾರೂ ಪ್ರೋತ್ಸಾಹ ನೀಡಬಾರದು ಎಂದರಲ್ಲದೆ, ಪೋಷಕರ ಮನೆಗೆ ತೆರಳಿದ ಅಧಿಕಾರಿಗಳು ಕುಟುಂಬಸ್ಥರ ಮನವೊಲಿಸಿ, ಬಾಲ್ಯವಿವಾಹ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರ ಬರೆಸಿಕೊಂಡರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರೇಣುಕಮ್ಮ ಎಂ. ದೇವಿರೆಡ್ಡಿ, ಪೊಲೀಸ್ ಇಲಾಖೆಯ ಕೆ.ಎಲ್. ಉಮೇಶ್, ಮಕ್ಕಳ ಸಹಾಯವಾಣಿಯ ಸುಜಾತ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!