ಮಾವಿನಹೊಳೆಯಲ್ಲಿ ನಾಳೆ ಶ್ರೀಗುರು ಮಹಾರುದ್ರಸ್ವಾಮಿ ಮಹಾಶಿವರಾತ್ರಿ

ಮಾವಿನಹೊಳೆಯಲ್ಲಿ ನಾಳೆ ಶ್ರೀಗುರು ಮಹಾರುದ್ರಸ್ವಾಮಿ ಮಹಾಶಿವರಾತ್ರಿ - Janathavaniಚನ್ನಗಿರಿ, ಫೆ.16- ತಾಲ್ಲೂಕಿನ ಮಾವಿನಹೊಳೆ ಶ್ರೀ ಗುರು ಮಹಾರುದ್ರ ಸ್ವಾಮಿಯ ಮಹಾಶಿವರಾತ್ರಿ ಮಹೋತ್ಸ ವವು ಶ್ರೀ ರೇಣುಕಾ ಶಿವಾಚಾರ್ಯ ಮಹಾ ಸ್ವಾಮೀಜಿ (ಯಡಿಯೂರು ಕ್ಷೇತ್ರ ಹಾಗೂ ಚನ್ನಗಿರಿ ತಾಲ್ಲೂಕು ತಾವರಕೆರೆ ಶಿಲಾ ಮಠ) ದಿವ್ಯ ಸಾನ್ನಿಧ್ಯದಲ್ಲಿ ನಾಳೆಯಿಂದ 3 ದಿವಸ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 18ರ ಶನಿವಾರ ರಾತ್ರಿ 8 ಗಂಟೆಗೆ ಜಾಗರಣೆ ನಂತರ 10.30ಕ್ಕೆ ಶ್ರೀ ಗುರು ಮಹಾರುದ್ರ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವವನ್ನು ವೀರಗಾಸೆ, ನೃತ್ಯ, ಭಜನೆ,   ಮಂಗಳವಾದ್ಯ ಗಳೊಡನೆ ಶ್ರೀಮಠಕ್ಕೆ ಆಗಮಿಸುವುದು.ನಂತರ ಬೆಳಗಿನ ಜಾವ 4ಕ್ಕೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಅಷ್ಟೋತ್ತರ, ದೀಪೋತ್ಸವ, ಸಹಸ್ರ ಬಿಲ್ವಾರ್ಚನೆ, ಪಾದಪೂಜೆ,   ಪ್ರಸಾದ ವಿನಿಯೋಗ ನಡೆಯುವವು.

 ದಿನಾಂಕ 19ನೇ ಭಾನುವಾರ ಬೆಳಿಗ್ಗೆ 8ಕ್ಕೆ ಶ್ರೀ ಗುರು ಮಹಾರುದ್ರ ಸ್ವಾಮಿಯ ಮಹಾಪೂಜೆ ಜರುಗುವುದು.  

error: Content is protected !!