ದಿನೇಶ್ ಶೆಟ್ಟಿ ಅವ್ಯವಹಾರಗಳ ದಾಖಲೆ ನನ್ನಲ್ಲಿವೆ : ಮೇಯರ್ ಅಜಯ್‌ಕುಮಾರ್

ದಾವಣಗೆರೆ,ಮೇ 25- ಪಾಲಿಕೆಯ ಬಹುತೇಕ ಕಡೆ ಅವ್ಯವಹಾರ ನಡೆದಿದೆ ಎಂದು ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಮಾಡಿರುವ ಆರೋಪವನ್ನು ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಅಲ್ಲಗಳೆದಿದ್ದಾರೆ.

ಅವ್ಯವಹಾರ ನಡೆದಿದೆ ಎಂದು ಹೇಳುವ ದಿನೇಶ್ ಶೆಟ್ಟಿ ಅವರು ಈ ಕೂಡಲೇ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೇ, ಉತ್ತರವನ್ನೂ ಕೊಡುತ್ತೇನೆ ಎಂದಿರುವ ಮೇಯರ್, ದಿನೇಶ್ ಶೆಟ್ಟಿ ಅಧಿಕಾರವಧಿಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ ಎಂದು ಹೇಳಿದ್ದಾರೆ.

ದಿನೇಶ್ ಶೆಟ್ಟಿ ಅವರು ಸತತ ಮೂರು ಬಾರಿ ಗೆದ್ದು ಅಧಿಕಾರ ಅನುಭವಿಸಿದ್ದಾರೆ. ಈಗ ಸೋತಿರುವ ದಿನಗಳಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಂತಹ ರಾಜಕಾರಣ ಮಾಡಲು ತಮಗೆ ಬರುವುದಿಲ್ಲ. ನಾನು ಜನರ ಸೇವೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ. ತನಗೆ ಹಣ ಮಾಡುವ ಅವಶ್ಯಕತೆ ಇಲ್ಲ ಎಂದು ಅಜಯ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಆರೋಪ ಮಾಡುವುದಕ್ಕೂ ಇತಿ-ಮಿತಿ ಗಳಿರುತ್ತವೆ. ಅದರಂತೆ ಮಾಡಬೇಕೇ ವಿನಃ ಸೋತಿದ್ದೇನೆ ಎಂಬ ಒಂದೇ ಕಾರಣಕ್ಕೆ ಆರೋಪ ಮಾಡುವುದನ್ನೇ ರಾಜಕೀಯ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಯಲ್ಲ ಎಂದು ಮೇಯರ್‌ ಅಭಿಪ್ರಾಯಪಟ್ಟಿದ್ದಾರೆ.

error: Content is protected !!