ವಿರಕ್ತಮಠದಲ್ಲಿ ರಾತ್ರಿ `ನಿತ್ಯ ದಾಸೋಹ’

ದಾವಣಗೆರೆ, ಡಿ.3- ಚಿತ್ರದುರ್ಗ ಬೃಹ ನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸ ವದ ಸವಿನೆನಪಿನಲ್ಲಿ ಶ್ರೀ ಬಸವೇಶ್ವರ ಸರ್ವ ಧರ್ಮ ದಾಸೋಹ ಸಂಘದ ವತಿಯಿಂದ ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ರಾತ್ರಿ 7.30ರಿಂದ `ನಿತ್ಯ ದಾಸೋಹ ಸೇವೆ’ ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಶ್ರೀ ಬಸವೇಶ್ವರ ಜಯಂತಿಯಂದು ನಿತ್ಯ ದಾಸೋಹ ಕಾರ್ಯಕ್ರಮ ಆರಂಭಿಸಲಾಗುವುದು. ಈ ವೇಳೆ ಚಿತ್ರದುರ್ಗ ಮುರುಘಾ ಶರಣರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮ, ಜಾತಿಗಳ ಗುರುಗಳನ್ನೂ ಆಹ್ವಾನಿಸಲಾಗುವುದು. ಇದೇ ವೇಳೆ ದಾಸೋಹದ ದಾನಿಗಳನ್ನು ಗೌರವಿಸಲಾಗುವುದು  ಎಂದು ಹೇಳಿದರು.

ಶ್ರೀ ಬಸವೇಶ್ವರ ಸರ್ವಧರ್ಮ ದಾಸೋಹ ಸಂಘದ ವತಿಯಿಂದ ಹಮ್ಮಿಕೊಂಡಿರುವ ದಾಸೋಹಕ್ಕೆ ದಾನ ನೀಡುವವರು ಬ್ಯಾಂಕ್ ವಿವರ ಶ್ರೀ ಬಸವೇಶ್ವರ ಸರ್ವಧರ್ಮ ದಾಸೋಹ ಸಂಘ ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ 1902500102996001, ಐಎಫ್‌ಎಸ್‌ಸಿ ಸಂಖ್ಯೆ KARB0000190 ಮತ್ತು ನಗರದ ಕಚೇರಿ ಎದುರು ಇರುವ ಗೋಪಿಕಾ ಡ್ರೈವಿಂಗ್ ಸ್ಕೂಲ್. ಮೊಬೈಲ್ 7353527555, 9035391608ಗೆ ಸಂಪರ್ಕಿಸಬಹುದು.  ದೇಣಿಗೆ ನೀಡಿದವರಿಗೆ ರಶೀದಿ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಸವೇಶ್ವರ ಸರ್ವಧರ್ಮ ದಾಸೋಹ ಸಂಘದ ಅಧ್ಯಕ್ಷ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಕೆ. ಹನುಮಂತಪ್ಪ ಉಪಸ್ಥಿತರಿದ್ದರು.

error: Content is protected !!