ಕ.ಸಾ.ಪ. ಚುನಾವಣೆ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ನಡೆಯುವಂತಾಗಲಿ

ಕ.ಸಾ.ಪ. ಚುನಾವಣೆ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ನಡೆಯುವಂತಾಗಲಿ - Janathavaniದಾವಣಗೆರೆ, ಮಾ.24-  ಇದೇ ಮೇ 9 ರಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯುತ್ತಿದ್ದು, ಪ್ರತಿ ಹೋಬಳಿಗೆ ಮತಗಟ್ಟೆ ಸ್ಥಾಪಿಸುವಂತೆ ಬಿ. ವಾಮದೇವಪ್ಪ ಅವರು ರಾಜ್ಯ ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 10946 ಮತದಾರರಿದ್ದಾರೆ. ಈ ಎಲ್ಲಾ ಮತದಾರರು ತಾಲ್ಲೂಕು ಕೇಂದ್ರಗಳಿಗೆ ಹೋಗಿ ಮತದಾನ ಮಾಡುವುದು ಕಷ್ಟಸಾಧ್ಯವಾದ ಕೆಲಸವಾಗುತ್ತದೆ ಎಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಬಿ. ವಾಮದೇವಪ್ಪ ಹೇಳಿದ್ದಾರೆ.

error: Content is protected !!