ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡ ವಚನಾನಂದ ಶ್ರೀ

ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡ ವಚನಾನಂದ ಶ್ರೀ - Janathavaniಮಲೇಬೆನ್ನೂರು, ಏ. 24- ನಮ್ಮ ಜನ್ಮದಿನದ ಕೊಡುಗೆಯಾಗಿ ಭಕ್ತರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಿ, ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಮಾಸ್ಕ್ ವಿತರಿಸಿ, ದೈಹಿಕ ಅಂತರ ಮರೆಯಬೇಡಿ. ಮಾಸ್ಕ್ ಧರಿಸದೇ ಹೊರಗಡೆ ಬರಬೇಡಿ ಎಂದು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಂದೇಶ ನೀಡಿದ್ದಾರೆ.

ಶನಿವಾರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಭಕ್ತರಿಗೆ ನಮ್ಮ ಜನ್ಮ ದಿನಕ್ಕೆ ನಿಮ್ಮ ಆರೋಗ್ಯ ವನ್ನು ಉಡುಗೊರೆಯಾಗಿ ನೀಡಿ ಎಂಬ ಶೀರ್ಷಿಕೆಯಲ್ಲಿ ಸಂದೇಶ ನೀಡಿ ವಿಶಿಷ್ಟವಾಗಿ ತಮ್ಮ ಜನ್ಮ ದಿನ ಆಚರಿಸಿಕೊಂಡರು.

ನಿಷೇಧ : ಈ ನಡುವೆ ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಪಂಚಮಸಾಲಿ ಪೀಠಕ್ಕೆ ಸಾರ್ವಜನಿಕರ ನಿಷೇಧ ಎಂಬ ಫಲಕವನ್ನು ಮಠದ ಗೇಟಿಗೆ ಹಾಕಲಾಗಿದೆ.

ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡ ವಚನಾನಂದ ಶ್ರೀ - Janathavaniದಾವಣಗೆರೆ, ಏ.24- ಚಿಗಟೇರಿ ಆಸ್ಪತ್ರೆಯಲ್ಲಿ ಜಗದ್ಗುರು ಶ್ರೀ ವಚನಾ ನಂದ ಸ್ವಾಮೀಜಿ ಅವರು ಕೋವಿ ಶಿಲ್ಡ್ ವ್ಯಾಕ್ಸಿನ್ ಪಡೆದುಕೊಂಡರು.

error: Content is protected !!