ಕೂಡ್ಲಿಗಿಯಲ್ಲಿ ಕಾರ್ಮಿಕನ ಸಾವು

ಕೂಡ್ಲಿಗಿಯಲ್ಲಿ ಕಾರ್ಮಿಕನ ಸಾವು - Janathavaniಕೂಡ್ಲಿಗಿ, ಫೆ.17 – ತಾಲ್ಲೂಕಿನ ಚೌಡಾಪುರ ಕೆರೆಯಲ್ಲಿ ಬುಧವಾರ ನರೇಗಾ ಕಾಮಗಾರಿಯಲ್ಲಿ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕ ಬಾರಿ ಕರ ಪಂಪಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಪಂಚಾಯ್ತಿ ಕಾರ್ಯದರ್ಶಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಈ ಹೊತ್ತಿಗೆ ಪಂಪಣ್ಣ (46) ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ. ಬಸಣ್ಣ ಮೃತರ ಕುಟಂಬಕ್ಕೆ ಇಲಾಖೆಯಿಂದ ನೀಡುವ 25 ಸಾವಿರ ರೂ. ಪರಿಹಾರದ ಜತೆಗೆ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

error: Content is protected !!