22ಕ್ಕೆ ಸರ್‌.ಎಂ.ವಿ ವೈಭವ

ದಾವಣಗೆರೆ, ಮಾ.10- ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಇದೇ ದಿನಾಂಕ 15ರಿಂದ 17ರ ವರೆಗೆ `ರಾಷ್ಟ್ರೀಯ ವೃತ್ತಿ ರಂಗೋತ್ಸವ-2025′ ನಡೆಯಲಿದೆ.

ವಿಚಾರ ಸಂಕಿರಣ, ರಂಗ ದಾಖಲೆ, ಚಿತ್ರಕಲಾ ಪ್ರದರ್ಶನ ಮತ್ತು ರಂಗ ಸಂವಾದ ಸೇರಿದಂತೆ, ಮೂರು ದಿವಸ 3 ಮಹತ್ವದ ನಾಟಕಗಳ ಪ್ರದರ್ಶನ ಜರುಗಲಿವೆ. ಈ ಮೂರೂ ನಾಟಕಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ `ನಾಟಕ ವಿಮರ್ಶಾ’ ಸ್ಪರ್ಧೆ ಏರ್ಪಡಿಸಲಾಗಿದೆ.

ವಿಜೇತ ಅಭ್ಯರ್ಥಿಗಳಿಗೆ ಪ್ರಥಮ ಬಹುಮಾನವಾಗಿ (3 ಸಾವಿರ ನಗದು), ದ್ವಿತೀಯ (2 ಸಾವಿರ ನಗದು) ಹಾಗೂ ತೃತೀಯ 1 ಸಾವಿರ ನಗದನ್ನು  ಮಾ.27ರಂದು ನಡೆಯುವ `ವಿಶ್ವ ರಂಗಭೂಮಿ ದಿನಾಚರಣೆ’ ಕಾರ್ಯಕ್ರಮದಲ್ಲಿ ನೀಡಲಾಗುವುದು.

ಸ್ಪರ್ಧೆಯು ಹಲವು ಷರತ್ತುಗಳನ್ನು ಒಳಗೊಂಡಿದ್ದು, ಐದುನೂರು ಪದಗಳ ಮಿತಿಯಲ್ಲಿರಬೇಕು. ವಿಮರ್ಶೆ ಮೂರು ನಾಟಕಗಳ ಕುರಿತು ಇರಬೇಕು ಮತ್ತು ತಾವು ವಿದ್ಯಾರ್ಥಿ ಎಂಬುದರ ದಾಖಲೆ ಸಲ್ಲಿಸಬೇಕಿದೆ.

ವಿಮರ್ಶಾ ಬರಹ ಕಳುಹಿಸಬೇಕಾದ ವಿಳಾಸ : ನಿರ್ದೇಶಕರು, ವಿಶೇಷಾಧಿಕಾರಿಗಳು ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ 38ಎ ಮೊದಲ
ಮಹಡಿ, ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ
ದಾವಣಗೆರೆ – 577006. ಈ ವಿಳಾಸಕ್ಕೆ ಇದೇ ದಿನಾಂಕ 20 ರೊಳಗೆ ತಮ್ಮ ಬರಹ ಸಲ್ಲಿಸಬೇಕು.

error: Content is protected !!