ವಿನೋಬನಗರದಲ್ಲಿ ಅನ್ನ ಸಂತರ್ಪಣೆ

ದಾವಣಗರೆ, ಸೆ. 11 – ಸ್ಥಳೀಯ ವಿನೋಬನಗರದ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿಯಿಂದ 32ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು, ಪ್ರತಿ ದಿನ ಸಂಜೆ 6.30ಕ್ಕೆ ವಿಶೇಷ ಪ್ರದರ್ಶನ ನೀಡಲಾಗುತ್ತಿದೆ.

ನಾಡಿದ್ದು ದಿನಾಂಕ 13ರ ಶುಕ್ರವಾರ ದಾವಣಗೆರೆ-ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.  

ಇದೇ ದಿನಾಂಕ 15ರ ಭಾನುವಾರ ಮಧ್ಯಾಹ್ನ 12ರಿಂದ ಶ್ರೀ ವಿನಾಯಕ  ಮೂರ್ತಿಯನ್ನು ಮೆರವಣಿಗೆ ಮೂಲಕ ಬಾತಿ ಕೆರೆಯಲ್ಲಿ  ವಿಸರ್ಜಿಸಲಾಗುವುದು.

error: Content is protected !!