ಭಾವಸಾರ ವಿಜನ್‌ ಎಜುಕೇಶನ್‌ ಟ್ರಸ್ಟ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ

ದಾವಣಗೆರೆ, ಜು.30- ನಗರದ ಭಾವಸಾರ ವಿಜನ್‌ ಎಜುಕೇಶನ್‌ ಟ್ರಸ್ಟ್‌ ವತಿಯಿಂದ ಭಾವಸಾರ ಕ್ಷತ್ರೀಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯು.ಸಿ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶೀಪ್‌ ನೀಡಲಾಗುವುದು. ನಾಳೆಯೊಳಗೆ ನಿಗದಿತ ಅರ್ಜಿಯನ್ನು ನಗರದ ಮಹಾರಾಜಪೇಟೆ ಯಲ್ಲಿರುವ ಶ್ರೀ ವಿಠಲ ಮಂದಿರದ ವ್ಯವಸ್ಥಾಪಕರಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ವ್ಯವಸ್ಥಾಪಕ ರಲ್ಲಿ ಸಲ್ಲಿಸುವಂತೆ ಟ್ರಸ್ಟ್ ಅಧ್ಯಕ್ಷ ವಾಗೀಶಬಾಬು ಗುಜ್ಜರ್‌ ತಿಳಿಸಿದ್ದಾರೆ.

error: Content is protected !!