ಹಂಪನಾ ನಿಧನ: ಜಿಲ್ಲಾ ಕಸಾಪ ಶ್ರದ್ಧಾಂಜಲಿ

ದಾವಣಗೆರೆ, ಜೂ. 22- ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಹಿರಿಯ ಚೇತನ ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಸೇವೆ ಅನುಪಮ. ಅಂತಹ ಕನ್ನಡ ಸಾಹಿತ್ಯದ ಸ್ತ್ರೀ ರತ್ನವನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ವಾಮದೇವಪ್ಪ ತಮ್ಮ ನುಡಿ ನಮನದಲ್ಲಿ ಸ್ಮರಿಸಿದ್ದಾರೆ. 

error: Content is protected !!