ಹರಪನಹಳ್ಳಿಯಲ್ಲಿ ಇಂದು ಹೆಚ್.ಮಲ್ಲಿಕಾರ್ಜುನ್‌ ಕೃತಿ ಬಿಡುಗಡೆ

ಹರಪನಹಳ್ಳಿಯಲ್ಲಿ ಇಂದು  ಹೆಚ್.ಮಲ್ಲಿಕಾರ್ಜುನ್‌ ಕೃತಿ ಬಿಡುಗಡೆ

ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ್‌  ರಚಿಸಿರುವ  `ನಾನು ಗೆದ್ದೇ ಗೆಲ್ಲುತ್ತೇನೆ’  ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಇಂದು  ಬೆಳಿಗ್ಗೆ 10-30ಕ್ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. 

 ಸಪ್ನ ಪ್ರಕಾಶನ ಮತ್ತು ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಹಿರೇಹಡಗಲಿ ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಡಾ.ಮಳೆ ಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಕೃತಿ ಲೋಕಾರ್ಪಣೆ ಮಾಡುವರು.   ತೆಗ್ಗಿನ ಮಠದ ಕಾರ್ಯದರ್ಶಿ ಡಾ. ಟಿ.ಎಂ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸುವರು.

 ಕೃತಿ ಕುರಿತು ಎಂ.ಪಿ.ಎಂ.ಶಾಂತವೀರಯ್ಯ  ಮತ್ತು ನಿವೃತ್ತ ಶಿಕ್ಷಕ ಬಾಗಳಿ ಬಣಕಾರ ರಾಜಶೇಖರ್‌ ಮಾತನಾಡುವರು.  ಮುಖ್ಯ ಅತಿಥಿಗಳಾಗಿ ಡಾ.ಟಿ.ಎಂ. ರಾಜಶೇಖರ್, ಸಪ್ನ ಮಲ್ಲಿಕಾರ್ಜುನ,   ಕೆ.ಉಚ್ಚೆಂಗೆಪ್ಪ,  ಡಿ. ರಾಮನಮಲಿ, ಸುಭದ್ರ ಮಾಡ್ಲಿಗೇರಿ, ಸಾಹಿತಿ ತೆಲಿಗಿ ಕೆ.ಎಸ್. ವೀರಭದ್ರಪ್ಪ ಭಾಗವಹಿಸುವರು. 

error: Content is protected !!