ನಗರಕ್ಕೆ 15ರಂದು ಶ್ರೀಶೈಲ ಜಗದ್ಗುರುಗಳು

ನಗರಕ್ಕೆ 15ರಂದು ಶ್ರೀಶೈಲ ಜಗದ್ಗುರುಗಳು

ದಾವಣಗೆರೆ, ಜೂ.11- ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಶ್ರೀ ವಾಗೀಶ ಪಂಡಿತ ರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಗಳವರ ಪುಣ್ಯಾ ರಾಧನೆ ಹಾಗೂ ಧರ್ಮ ಸಭೆ ನಡೆಸುವ ಸಂಬಂಧ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರ ಆವರಣದಲ್ಲಿರುವ ಶ್ರೀ ಶಾಮನೂರು ಸಾವಿತ್ರಮ್ಮ ಕಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆಯನ್ನು ಇದೇ ದಿನಾಂಕ 15ರ ಶನಿವಾರ ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ಶ್ರೀಶೈಲ ಪೀಠದ ಜಗದ್ಗುರು ಡಾ|| ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸುವರು.

error: Content is protected !!