ಕಳ್ಳನ ಬಂಧನ : 4 ಬೈಕ್‌ಗಳ ವಶ

ದಾವಣಗೆರೆ, ಜೂ.2- ಬೈಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ಒಟ್ಟು 1.6 ಲಕ್ಷ ರೂ. ಮೌಲ್ಯದ 4 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಹೊಸನಾಯಕನ ಹಳ್ಳಿ ನಿವಾಸಿ ಫಣಿರಾಜ್‌ ಬಂಧಿತ ಆರೋಪಿ. ಈತನು ಶ್ಯಾಮನೂರು ರಸ್ತೆ, ತ್ಯಾವಣಿಗೆ ಮತ್ತು ಶಿವಮೊಗ್ಗದಲ್ಲಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. 

ನಗರದ ಹೊರವಲಯದ ಅಶ್ವಿನಿ ಆಯುರ್ವೇದಿಕ್ ಕಾಲೇಜು ಹತ್ತಿರ, ರೆಡ್ಡಿ ಡಾಬಾ ಎದುರು ನಿಲ್ಲಿಸಿದ್ದ ಬೈಕ್‌ ಕಳ್ಳತನ ಪ್ರಕರಣವೊಂದರ ತನಿಖೆಯಲ್ಲಿ ಆರೋಪಿಯ ಜಾಡು ಹಿಡಿದು ಕಳ್ಳನನ್ನು ಬಂಧಿಸಿ, ಕದ್ದಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ವಿಜಯ್‌ ಕುಮಾರ್‌ ಎಂ. ಸಂತೋಷ್‌, ಮಂಜುನಾಥ್‌ ಹಾಗೂ ಗ್ರಾಮಾಂತರ ಉಪವಿಭಾಗದ ಅಧೀಕ್ಷಕ ಪ್ರಶಾಂತ್‌ ಸಿದ್ಧನಗೌಡರ್‌, ಗ್ರಾಮಾಂತರ ಠಾಣೆಯ ಕಿರಣ್‌ ಕುಮಾರ್‌  ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಜೋವಿತ್‌ ರಾಜ್‌, ದೇವೇಂದ್ರನಾಯ್ಕ್‌, ನಾಗಭೂಷನ್‌, ಅಣ್ಣಯ್ಯ, ಮಹಮ್ಮದ್‌ ಯೂಸುಫ್‌ ಅತ್ತಾರ್‌, ಪಿ.ಎಂ. ವೀರೇಶ್‌ ಅವರನ್ನೊಳಗೊಂಡ ತಂಡ ಪ್ರಕರಣ ಭೇದಿಸಿದೆ.

error: Content is protected !!