ದಾವಣಗೆರೆ ಮೇ 28 – ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆವರಗೊಳ್ಳ, ಬುಳ್ಳಾಪುರ, ವ್ಯಾಸಗೊಂಡನಹಳ್ಳಿ, ಗರಗ, ಬೇಲಿಮಲ್ಲೂರು, ಕಡರನಾಯಕ ನಹಳ್ಳಿ ಹಾಗೂ ಎಕ್ಕೆಗೊಂದಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ತಳಿಯ ನಾಟಿಗೆ ಯೋಗ್ಯವಾದ ತೆಂಗು, ಅಡಿಕೆ ಸಸಿಗಳು ಲಭ್ಯವಿರುತ್ತವೆ. ಆಸಕ್ತ ರೈತರು ಇಲಾಖೆ ನಿಗದಿಪಡಿಸಿದ ದರದಂತೆ ಮೇಲಿನ ಕ್ಷೇತ್ರಗಳಿಂದ ಸಸಿಗಳನ್ನು ಖರೀದಿಸಬಹುದು. ವಿವರಕ್ಕೆ ದೂರವಾಣಿ 9591771724, 9448581142, 8296357345 ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.
July 23, 2024