ನಗರದ ಅನ್ನದಾನೀಶ್ವರ ಮಠದಲ್ಲಿ ಇಂದು ಶಿವಾನುಭವ ಸಂಪದ

ಹಾಲಕೆರೆ ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ವತಿಯಿಂದ 269 ನೇ ಶಿವಾನುಭವ ಸಂಪದ, ಮಹಿಳಾ ದಿನಾಚರಣೆ ಹಾಗೂ ಶ್ರೀ ಬಸವ ಜಯಂತಿ ಕಾರ್ಯಕ್ರಮವು ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಇಂದು ಸಂಜೆ 6.30 ಕ್ಕೆ ನಡೆಯಲಿದೆ. 

ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕರಾದ ಡಾ. ಜಿ. ನೀಲಮ್ಮ  ಉಪನ್ಯಾಸ ನೀಡಲಿದ್ದಾರೆ. ಸಿದ್ದಗಂಗಾ ಶಾಲೆಯ ಶ್ರೀಮತಿ ಜಸ್ಟಿನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅಕ್ಕನ ಬಳಗದ ಅಧ್ಯಕ್ಷರಾದ ಶ್ರೀಮತಿ ಮಂಗಳಾ ವೀರಪ್ಪ ಬಾವಿ ಅಧ್ಯಕ್ಷತೆ ವಹಿಸುವರು.

ದಿ.ಶ್ರೀಮತಿ ಬಸವಲಿಂಗಮ್ಮ ಮತ್ತು ದಿ. ಎಂ.ಸಿ. ಸದಾಶಿವಯ್ಯ ಇವರ ಸ್ಮರಣಾರ್ಥ ಶ್ರೀಮತಿ ನಾಗರತ್ನ ಹೊಸಮನಿ ಮತ್ತು ನರೇಂದ್ರ ಪ್ರಕಾಶ್ ಹಾಗೂ ಮಕ್ಕಳು ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದು, ಶ್ರೀ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ.ಹೆಚ್.ಎಂ. ಶಿವಕುಮಾರಸ್ವಾಮಿ ಸಂಗೀತ ಸೇವೆ ಒದಗಿಸುವರು. 

error: Content is protected !!